Advertisement

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಹೊನ್ನಾವರದ ಮಹಿಳೆ ಸಾವು

04:32 PM Apr 25, 2019 | pallavi |

ಹಳಿಯಾಳ/ಹೊನ್ನಾವರ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಅವರ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಐಮಂಗಲ ಸಮೀಪ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ಮೃತ ಮಹಿಳೆಯನ್ನು ಹೊನ್ನಾವರ ಮೂಲದ ಶಾರದಮ್ಮ ಗಾವಡೆ (35) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪತಿ ಸುನೀಲ್ ಗಾವಡೆ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ದಾಂಡೇಲಿಯಿಂದ ಬೆಂಗಳೂರಿಗೆ ತೆರಳುತ್ತಿರುವಾಗ ಈ ಅವಘಡ ನಡೆದಿದೆ.

Advertisement

ಸುನೀಲ್ ಗಾವಡೆ ಅವರು ದಾಂಡೇಲಿ ನಗರಸಭೆಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಐಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾರದಾ ಅವರು ಹಳಿಯಾಳದಲ್ಲಿ ಸೆನಿಟರಿ ಇನ್‌ಸ್ಪೆಫೆಕ್ಟರ್‌ ಆಗಿ ಕೆಲಸಮಾಡುತ್ತಿದ್ದರು. ಇವರು ಹೊನ್ನಾವರದ ಮಾಳ್ಕೋಡಿನವರು, ಗಾವಡೆ ಹಳಿಯಾಳದವರು. ಅವರ ಕಳೆಬರಹ ಬುಧವಾರ ರಾತ್ರಿ 8ಕ್ಕೆ ಹಳಿಯಾಳಕ್ಕೆ ತಲುಪಿದ್ದು, ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಂದ ರಾತ್ರಿ ಶವವನ್ನು ಹೊನ್ನಾವರಕ್ಕೆ ಒಯ್ಯಲಾಗಿದೆ. ಅವರ ಅಕಾಲಿಕ ನಿಧನಕ್ಕೆ ಸಚಿವ ಆರ್‌.ವಿ ದೇಶಪಾಂಡೆ, ಎಂ.ಎಲ್.ಸಿ ಎಸ್‌.ಎಲ್ ಘೋಕ್ಲೃಕರ, ಕಚೇರಿಯ ಎಲ್ಲ ಸಿಬ್ಭಂದಿ ವರ್ಗ ಹಾಗೂ ಇತರ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next