Advertisement

ಶರಾವತಿ ಹಿನ್ನೀರಿಗೆ ಇಳಿದ ಬಸ್ : ಹೊಳೆ ಬಾಗಿಲಿನಲ್ಲಿ ತಪ್ಪಿದ ಭಾರಿ ದುರಂತ

06:40 PM Nov 26, 2022 | Team Udayavani |

ಶಿವಮೊಗ್ಗ : ಸುದೈವವಶಾತ್ ಶರಾವತಿ ಹಿನ್ನೀರಿನಲ್ಲಿ ಶನಿವಾರ ಭಾರಿ ದುರಂತ ತಪ್ಪಿಹೋಗಿದ್ದು, ಚಾಲಕನ‌ ನಿಯಂತ್ರಣ ತಪ್ಪಿದ ಬಸ್ ಶರಾವತಿ ನೀರಿಗೆ ಇಳಿದಿದೆ.

Advertisement

ಸಾಗರ ತಾಲೂಕು ಹೊಳೆ ಬಾಗಿಲಿನ ಹಿನ್ನೀರಿನಲ್ಲಿ ಸಿಗಂದೂರು ಕಡೆ ಹೊರಟಿದ್ದ ಬಸ್ ಲಾಂಚ್ ಗಾಗಿ ಕಾಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಇಳಿದಿದೆ. ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಬಸ್ ನಿಂದ ಹೊರಬಂದು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ.

ಬಳಿಕ ಸಿಗಂದೂರು ಸೇತುವೆ ನಿರ್ಮಾಣದ ಹಿಟಾಚಿ ಬಳಸಿ ಬಸ್ ಮೇಲಕ್ಕೆತ್ತಲಾಗಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next