Advertisement
ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೂತ್ ಸಮಿತಿ ರಚನೆ ಮಾಡುವ ಮೂಲಕ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಚುನಾವಣೆ ಯ ಫಲಿತಾಂಶ ಬಂದಾಗ ಬೂತ್ ಕಮಿಟಿಗಳ ಪ್ರಭಾವ ಎದ್ದು ಕಾಣಲಿಲ್ಲ. ಪಕ್ಷ ಸೋತ ಬೇಸರದಲ್ಲಿ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. “ಪ್ರಾಜೆಕ್ಟ್ ಶಕ್ತಿ’ ವೇಳೆ ಬಹಿರಂಗ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಲು ಜಾರಿಗೆ ತಂದ ಯೋಜನೆಯೇ “ಪ್ರಾಜೆಕ್ಟ್ ಶಕ್ತಿ’. ಇದನ್ನು ಅನುಷ್ಠಾನಕ್ಕೆ ಮುಂದಾಗಿರುವ ಸಂದರ್ಭದಲ್ಲಿ ನಾಯಕರು ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಲು ಹೋದಾಗ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಕಮಿಟಿಗಳೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಹಿಂದಿನ ಅವಧಿಯಲ್ಲಿ ಸಚಿವರು ಹಾಗೂ ಶಾಸಕರಾಗಿದ್ದವರು ಬೂತ್ ಕಮಿಟಿ ಮಾಡುವ ಗೋಜಿಗೆ ಹೋಗಿಲ್ಲ. ಅದರ ಪರಿಣಾಮ ಚುನಾವಣೆಯಲ್ಲಿ ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ತಲುಪಿಸಲು ಕಾಂಗ್ರೆಸ್ ವಿಫಲವಾದ ಬಗ್ಗೆ ವಾಸ್ತವಾಂಶ ಈಗ ಗೊತ್ತಾಗಿದೆ.
ಸುವ ಜವಾಬ್ದಾರಿ ವಹಿಸಲಾಗಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಕಾರ್ಯಕರ್ತರನ್ನು ಈ ಯೋಜನೆ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ. ಸ್ಪಷ್ಟ ಮಾಹಿತಿ ಇಲ್ಲ: ಯೋಜನೆ ಜಾರಿಗೆ ಎಐಸಿಸಿ ಕಾರ್ಯದರ್ಶಿಯಾಗಿದ್ದ ಸೂರಜ್ ಹೆಗಡೆಯನ್ನು ಸಂಯೋಜಕರನ್ನಾಗಿ ನೇಮಿಸಲಾಗಿದೆ. ಆದರೆ,
ಜಿಲ್ಲಾ, ಬ್ಲಾಕ್ ಅಧ್ಯಕ್ಷರಿಂದ ಕೆಳ ಹಂತದ ಕಾರ್ಯಕರ್ತರಿಗೆ ಈ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ತಲುಪಿಸುವ ಕೆಲಸ ಆಗಿಲ್ಲ. ಯೋಜನೆಗೆ ಸೇರ್ಪಡೆಯಾಗುವವರು ಓಟರ್ ಐಡಿ ನಂಬರನ್ನು ನೇರವಾಗಿ 7045006100 ಮೆಸೆಜ್ ಮಾಡಿದರೆ, ರಾಹುಲ್ ಗಾಂಧಿಯಿಂದಲೇ ಧನ್ಯವಾದದ
ಮೆಸೇಜ್ ವಾಪಸ್ ಬರಲಿದೆ.
Related Articles
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರದ ಸಾಧನೆಗಳನ್ನು ರಾಜ್ಯದ ಪ್ರತಿಯೊಬ್ಬ ಮತದಾರನ ಮನೆಗೆ ಸಾಧನೆಗಳನ್ನು ತಲುಪಿಸಲು ಮನೆ ಮನೆಗೆ ಕಾಂಗ್ರೆಸ್ ಯೋಜನೆಯನ್ನು ಹಮ್ಮಿಕೊಂಡಿತ್ತು. ಅದಕ್ಕಾಗಿ ಸುಮಾರು 1 ಕೋಟಿ 20 ಲಕ್ಷ ಕೈಪಿಡಿಗಳನ್ನು ಪ್ರಕಟಿಸಲಾಗಿತ್ತು. ಆದರೆ, ಬಹುತೇಕ ಶಾಸಕರು ಮತ್ತು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸದೇ ನಿರ್ಲಕ್ಷ ತೋರಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ವಾಸ್ತವ ಪರಿಶೀಲನೆ ನಡೆಸಿದಾಗ ಶೇಕಡಾ 60 ರಷ್ಟು ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರು ಯೋಜನೆ ಜಾರಿಗೊಳಿಸದೇ ಕೈ ತೊಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
Advertisement
ಶಂಕರ ಪಾಗೋಜಿ