Advertisement

ಬಿಜೆಪಿಗೆ ಆಪರೇಷನ್‌ ಆಸೆ ಇದೆ: ಬೇಳೂರು

06:20 AM Dec 07, 2018 | Team Udayavani |

ಬೆಂಗಳೂರು: ಬಿಜೆಪಿಯವರು ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಇನ್ನೂ ಆಪರೇಷನ್‌ ಕಮಲದ ಮೂಲಕ ಸರ್ಕಾರ ಬೀಳಿಸಬೇಕು ಎಂಬ ಆಸೆಯಿದೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ನಿಂದ ಹೊರಗೆ ಹೋಗಿ ಚುನಾವಣೆ ಎದುರಿಸಲು ಯಾವ ಶಾಸಕರೂ ಸಿದ್ಧರಿಲ್ಲ ಎಂದು ಹೇಳಿದರು.

ಕಿಂಗ್‌ಪಿನ್‌ಗಳಲ್ಲೇ ದುಬೈಗೆ ಹೋಗಿ ಸೇರಿಕೊಂಡಿದ್ದಾರೆ. ಎರಡು ಬಾರಿ ಆಪರೇಷನ್‌ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ಮೂರನೇ ಬಾರಿ  ಈಗ ಕೇರಳಕ್ಕೆ ಹೋಗಿ ಪ್ರಯತ್ನಪಡುತ್ತಿದ್ದಾರೆ. ಯಡಿಯೂರಪ್ಪ ಕೇರಳಕ್ಕೆ ಹೋಗಿರುವುದು ಮಾಟ ಮಾಡಿಸಲು ಎಂದು ತಿಳಿಸಿದರು.

ನನ್ನನ್ನು ಶೋಭಾ ಕರಂದ್ಲಾಜೆ ಅವರು ಸಣ್ಣ ಮನುಷ್ಯ ಎಂದು ಹೇಳಿದ್ದಾರೆ. ನಿಜ, ನಾನು ಸಣ್ಣವನೇ. ನಿಂಬೆ ಹಣ್ಣು ಮಾರಲು ಬಂದ ಯಡಿಯೂರಪ್ಪ  ಮುಖ್ಯಮಂತ್ರಿ ಆಗಿಲ್ಲವೇ? ನಾನು ದೊಡ್ಡ ಮನುಷ್ಯ ಆಗುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next