Advertisement

ಕೇರಳ; ದೃಶ್ಯಂ ಸಿನೆಮಾ ಮಾದರಿಯಲ್ಲಿ ಕಾರ್ಯಕರ್ತನ ಕೊಲೆ

12:04 AM Oct 02, 2022 | Team Udayavani |

ಕೊಟ್ಟಾಯಂ: ಕಳೆದ ವಾರದಿಂದ ನಾಪತ್ತೆಯಾಗಿದ್ದ ಕೇರಳದ ಕೊಟ್ಟಾಯಂನ ಬಿಜೆಪಿ ಕಾರ್ಯಕರ್ತನ ಮೃತದೇಹ ಆತನ ಸ್ನೇಹಿತನ ಮನೆಯ ಆವರಣ­ದಲ್ಲಿಯೇ ಪತ್ತೆಯಾಗಿದೆ.

Advertisement

“ದೃಶ್ಯಂ’ ಸಿನೆಮಾದಲ್ಲಿ ದೃಶ್ಯವೊಂದರಲ್ಲಿ ಬರುವ ಮಾದರಿಯಲ್ಲಿಯೇ ಕೊಲೆ ನಡೆಸಿ ಮೃತದೇಹವನ್ನು ಹೂಳಲಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ­ಯಿಂದ ಈ ಅಂಶ ದೃಢ­ಪಟ್ಟಿದೆ. ಅವರನ್ನು ಬಿಂದು ಮೋನ್‌ ಎಂದು ಗುರುತಿಸ­ಲಾಗಿದೆ. ಅವರು ಆಲಪ್ಪುಳ ನಿವಾಸಿಯಾಗಿದ್ದು. ಸೆ.26ರಿಂದ ನಾಪತ್ತೆಯಾಗಿದ್ದರು.

ಈ ಬಗ್ಗೆ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆತನ ಸ್ನೇಹಿತ ಬಾಡಿಗೆಗೆ ಇದ್ದ ಮನೆಯ ಆವರಣದಲ್ಲಿಯೇ ಬಿಂದುಮೋನ್‌ನ ಮೃತದೇಹ ಪತ್ತೆಯಾಗಿತ್ತು.

ಕೊನೆಯದಾಗಿ ಆತ ಸ್ನೇಹಿತ ಮುತ್ತುಕುಮಾರ್‌ ಎಂಬಾತನಿಗೆ ಫೋನ್‌ ಮಾಡಿದ್ದು ದೃಢಪಟ್ಟಿದೆ ಎಂದೂ ತನಿಖೆಯಿಂದ ದೃಢಪಟ್ಟಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next