Advertisement

ಜೈಲಿಗೆ ಹೋಗಿದ್ದೇ ಬಿಜೆಪಿ ಸಾಧನೆ

11:37 AM Mar 30, 2018 | Team Udayavani |

ಬೆಂಗಳೂರು: ಬಿಜೆಪಿ ಅಧಿಕಾರ ಅವಧಿಯಲ್ಲಿ ಹತ್ತು ಜನ ಸಚಿವರು ಕಂಡು ಕೇಳರಿಯದ ಅಕ್ರಮ ಮಾಡಿ ಜೈಲಿಗೆ ಹೋಗಿದ್ದೆ ಸಾಧನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

Advertisement

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿನೋಟಿಫಿಕೇಶನ್‌, ಅಕ್ರಮ ಗಣಿಗಾರಿಕೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಜೈಲಿಗೆ ಹೋಗಿದ್ದು, ರಾಜ್ಯಕ್ಕೆ ದೊಡ್ಡ ಕಳಂಕ. ಇಷ್ಟೆಲ್ಲ ಅಕ್ರಮ ಮಾಡಿರುವ ಬಿಜೆಪಿಯನ್ನು ಜನತೆ ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದು ಮನವಿ ಮಾಡಿದರು.

ಶತಮಾನಗಳಿಂದಲೂ ಗಾರ್ಡನ್‌ ಸಿಟಿ ಎಂದು ಹೆಸರು ಪಡೆದಿದ್ದ ಬೆಂಗಳೂರಿನ ಕಸ ನಿರ್ವಹಣೆ ಮಾಡದೆ ಬಿಜೆಪಿ ಅಧಿಕಾರದಲ್ಲಿ ಗಾರ್ಬೆಜ್‌ ಸಿಟಿ ಎಂದು ಅಪಖ್ಯಾತಿಗೆ ಒಳಗಾಗುವಂತಾಗಿತ್ತು. ಬಿಜೆಪಿ ಅಧಿಕಾರ ಅವಧಿಯಲ್ಲಿ ಬಿಬಿಎಂಪಿಯ ಆಸ್ತಿ ಅಡ ಇಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಎಲ್ಲ ಆಸ್ತಿಯನ್ನು ವಾಪಸ್‌ ಪಡೆದು ಬೆಂಗಳೂರಿನ ಮಾನ ಕಾಪಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next