Advertisement

ಅಪಘಾತ; ಬೈಕ್ ಸವಾರ ಮತ್ತು ಹಸು ಸ್ಥಳದಲ್ಲೇ ಸಾವು

09:34 PM Jan 13, 2023 | Team Udayavani |

ಕೊರಟಗೆರೆ: ಬೆಂಗಳೂರಿನ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಹಸುವಿಗೆ ಢಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಮತ್ತು ಹಸು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕೋಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ತಣ್ಣೇನಹಳ್ಳಿ ಬಳಿ ಶುಕ್ರವಾರ ಸಂಜೆ ನಡೆದಿದೆ.

Advertisement

ಬೈಕ್ ಸವಾರ ಕಿಶೋರ್(26)ಮೃತ ದುರ್ದೈವಿ. ನರಸೇಗೌಡನಪಾಳ್ಯ ಅಗಳಿ ಮಂಡಲ್ ಮಡಕಶಿರಾ ತಾಲೂಕು ಅನಂತರ ಪುರ ಜಿಲ್ಲೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೋಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next