Advertisement

ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!

03:51 PM Mar 29, 2023 | Team Udayavani |

ಶಿರಸಿ: ಬುಧವಾರ ಶಾಸಕ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ 10ಕ್ಕೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು, ಸೌಲಭ್ಯ ವಿತರಣೆ ಕಾರ್ಯಕ್ರಮಗಳನ್ನು ಜೋಡಿಸಲಾಗಿತ್ತು. ನೀತಿ ಸಂಹಿತೆ ಜಾರಿಗೂ ಮುನ್ನ ಎಲ್ಲ ಕಾರ್ಯಕ್ರಮ ಮುಗಿಸುವ ತರಾತುರಿಯಲ್ಲಿ ಕಾಗೇರಿ ಇದ್ದರು. ಸಂಜೆ 5ಕ್ಕೆ ನಿಗದಿಯಾಗಿದ್ದ ಮರಾಠಿಕೊಪ್ಪ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಸೋಂದಾ ತೆರಳುವುದನ್ನು ಜೋಡಿಸಿಕೊಂಡರು. ಆದರೆ, ಸ್ಥಳದಲ್ಲಿ ಯಾವ ಸಿದ್ಧತೆ ಇರಲಿಲ್ಲ. ಮುಜುಗರಕ್ಕೆ ಒಳಗಾದರೂ ತೋರಿಸಿಕೊಳ್ಳದ ಕಾಗೇರಿ ಅವರು ತೆರಳಿದ ಮೇಲೆ ಬ್ಯಾನರ್‌ ಜೊತೆ ನಗರಸಭೆ ಸಿಬ್ಬಂದಿಗಳು ಬಂದರು. ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರಿಗಳ ಫೋಟೊ ಸೆಶನ್ ನಡೆಯಿತು. ಅಲ್ಲಿ ಕಾಗೇರಿ ಅವರು ಇರಲಿಲ್ಲ,ಅವರ ಭಾವ ಚಿತ್ರವಿತ್ತು!

Advertisement

ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ಇತರರು ಘಟನೆಗೆ ಸಮಜಾಯಿಸಿ ನೀಡಲು ಯತ್ನಿಸಿದರು. ಉದ್ಘಾಟನೆ ಮಾಡಿ ಬಿಡೋಣ ಎಂದವರಿಗೆ ಸಿದ್ಧತೆ ಮಾಡಲಾಗದೇ ಮುಜುಗರವಾದರೆ, ಗೌರವಾನ್ವಿತ ಸ್ಪೀಕರ್ ಹುದ್ದೆಯಲ್ಲಿದ್ದವರಿಗೆ ದಾರಿ ತಪ್ಪಿಸಿದವರು ಯಾರೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಯಿತು!

ಇದನ್ನೂ ಓದಿಕೋಲಾರ: ಸಿದ್ದು ಸ್ಪರ್ಧೆ ಘೋಷಣೆಗೆ ಏ.5ರ ಗಡುವು

Advertisement

Udayavani is now on Telegram. Click here to join our channel and stay updated with the latest news.

Next