Advertisement

ಗಮನ ಸೆಳೆದ ಯುವ ಗಾಯಕರ ಗಾಯನ

06:02 PM Jan 06, 2022 | Team Udayavani |

ಬಳಗಾನೂರು: ಪಟ್ಟಣದ ಸ್ನೇಹ ಲೋಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಕರ್ನಾಟಕ ರತ್ನ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ನಿಮಿತ್ತ ಹಮ್ಮಿಕೊಂಡ ಅಪ್ಪು ಸ್ವರ ನಮನ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ| ಶರಭಯ್ಯಸ್ವಾಮಿ ಗಣಾಚಾರಿಮಠ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ಮಹಾತ್ಮರ ಸಾಲಿನಲ್ಲಿ ನಿಲ್ಲುವಂತ ಮಹತ್ಕಾರ್ಯಗಳನ್ನು ಪುನಿತ್‌ ರಾಜ್‌ಕುಮಾರ್‌ ಮಾಡಿದ್ದಾರೆ. ಶರಣರು, ಸಂತರು, ಸತು³ರುಷರು ಜನಿಸಿದ ನಾಡಿನಲ್ಲಿ ಜನಿಸಿದ ಅಪ್ಪು ಅವರು ಅವರಂತೆ ಮಹಾ ಕಾಯಕವನ್ನು ಜೀವನದುದ್ದಕ್ಕೂ ರೂಢಿಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಿದ್ದಾರೆ. ಇಂತಹ ಕಾರ್ಯಕ್ರಮದ ಮೂಲಕ ಅವರ ನಡೆನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದರು.

ಅರ್ಚಕರಾದ ರಂಗನಾಥ ಪೂಜಾರ, ಯುವ ಮುಖಂಡ ರಿಯಾಜ್‌ ನಾಯ್ಕ, ವೀರೇಶಸ್ವಾಮಿ ಗುಣಾರಿ, ಸಂತೋಷಕುಮಾರ ಅಂಬ್ಲಿ, ವಿಜಯಹೆಂಬಾ, ಸಿಆರ್‌ಪಿ ಗಜಾನನ, ಶಿವಮೂರ್ತಿ, ಶಿಕ್ಷಕರಾದ ರಮೇಶ ಗೊಳಸಂಗಿ, ಬಸವರಾಜ ಯಾದಗಿರಿ, ಬಸವಲಿಂಗ ತಾಳಿಕೋಟಿ ಸೇರಿದಂತೆ ಸ್ನೇಹಲೋಕ ಗೆಳೆಯರ ಬಳಗದ ಪದಾಧಿ ಕಾರಿಗಳು, ಸ್ಥಳೀಯ ಕಲಾವಿದರು ಇದ್ದರು. ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು. ಸ್ಥಳೀಯ ಯುವ ಗಾಯಕ, ಗಾಯಕಿಯರು ನುಡಿನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next