Advertisement

ಬೆಂಗಳೂರಿಗೆ ಆಗಮಿಸಿದಸ್ಕೂಟರ್‌ ರೈಡ್‌ ಜೋಡಿ

03:52 PM Jul 01, 2018 | |

ಬೆಂಗಳೂರು: ಸುರಕ್ಷಿತ ಚಾಲನೆ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸಲು ಕನ್ಯಾಕುಮಾರಿಯಿಂದ ಲೇ ಲಡಾಕ್‌ವರೆಗೆ ಸ್ಕೂಟರ್‌ ರೈಡ್‌ ಅಭಿಯಾನ ಹಮ್ಮಿಕೊಂಡಿರುವ ಮಂಗಳೂರಿನ ಗಿರೀಶ್‌ ವೆಂಕಟರಮಣ ಹಾಗೂ ಸೂರಜ್‌ ಹೆನ್ರಿ ಜೋಡಿ ಶನಿವಾರ ನಗರಕ್ಕೆ ಆಗಮಿಸಿದೆ. ಲ್ಯಾಮ್‌ ಲೆಟ್‌ ಸ್ಕೂಟರ್‌ ಮೂಲಕ ಜೂ.26ರಂದು ಕನ್ಯಾಕುಮಾರಿಯಿಂದ ಪಯಣ ಆರಂಭಿಸಿರುವ ಈ ಜೋಡಿ, ಲಡಾಕ್‌ನ ಕಾಡುಂಗ್ಲು ತಲುಪುವ ಗುರಿ ಹೊಂದಿದೆ.

Advertisement

ನಗರದಿಂದ ಬಳ್ಳಾರಿ, ಹೈದಾರಾಬಾದ್‌, ನಾಗಪುರ, ಝಾನ್ಸಿ, ದೆಹಲಿ, ಚಂಡಿಗಡ, ಜಮ್ಮು, ಕಾಶ್ಮೀರದ ಮೂಲಕ ಲೇ ಲಡಾಕ್‌ ತಲುಪಿ ಜು.13ರಂದು ಕಾಡುಂಗ್ಲು ತಲುಪಲಿದ್ದೇವೆ ಎಂದು ಗಿರೀಶ್‌ ವೆಂಕಟರಮಣ ಮಾಹಿತಿ ನೀಡಿದರು. ಯುವಜನತೆ ವಾಹನ ಚಾಲನೆ ವೇಳೆ ಸುರಕ್ಷತಾ ಕ್ರಮಗಳತ್ತ ಗಮನಹರಿಸದ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಚಾಲನೆ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next