Advertisement

ಕೇರಳದ ಮುಸ್ಲಿಂ ಧರ್ಮ ಪ್ರಚಾರಕ ಅಕ್ಬರ್ ಬಂಧನ

10:35 AM Feb 27, 2018 | Team Udayavani |

ಹೈದರಾಬಾದ್‌: ಕೇರಳದ ಪೀಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ನಿರ್ದೇಶಕ ಮತ್ತು ಮುಸ್ಲಿಂ ಧರ್ಮಪ್ರಚಾರಕ ಎಂ.ಎಂ. ಅಕ್ಬರ್ನನ್ನು ಕೋಮು ದ್ವೇಷ ಹರಡಿದ ಆರೋಪ ದಲ್ಲಿ ಹೈದರಾಬಾದ್‌ನಲ್ಲಿ ರವಿವಾರ ಬಂಧಿಸಲಾಗಿದೆ. 2016ರಲ್ಲಿ ಪ್ರಕರಣ ವೊಂದರಲ್ಲಿ ಬಂಧಿ ಸಲ್ಪಟ್ಟಿದ್ದ ಅಕ್ಬರ್, ಅನಂತರ ಪಶ್ಚಿಮ ಏಷ್ಯಾ ದೇಶಗಳಲ್ಲಿ ವಾಸಿಸುತ್ತಿದ್ದ. ಈತ ನಿಶೆ ಆಫ್ ಟ್ರಾತ್‌ ಎಂಬ ಧರ್ಮ ಪ್ರಚಾರ ಸಂಸ್ಥೆ ಯನ್ನೂ ನಡೆಸುತ್ತಿದ್ದ. ಮೆಲ್ಬೋರ್ನ್ ನಿಂದ ಕತಾರ್‌ಗೆ ತೆರಳುತ್ತಿದ್ದ ವೇಳೆ ದಿಲ್ಲಿ ಯಲ್ಲಿ ಬಂಧಿಸಲಾಗಿದೆ. ಅಕºರ್‌ ವಿರುದ್ಧ ಕೇರಳ ಪೊಲೀಸರು ಈಗಾಗಲೇ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು.

Advertisement

2016ರಲ್ಲಿ ಪೀಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಪಠ್ಯಪುಸ್ತಕದಲ್ಲಿ ಕೋಮುದ್ವೇಷ ಹರಡುವ ಪಠ್ಯ ಬೋಧಿಸಲಾಗುತ್ತಿತ್ತು ಎಂಬ ಆರೋಪದಡಿ ಅಕ್ಬರ್ ಹಾಗೂ ಇತರ ಮೂವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಅಕºರ್‌ ದೇಶ ತೊರೆದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next