Advertisement

ಚಿನ್ನಾಭರಣ ದೋಚಿದ್ದವನ ಬಂಧನ

12:37 PM Oct 20, 2018 | Team Udayavani |

ಬೆಂಗಳೂರು: ದೇಸಿ ತುಪ್ಪ ಹಾಗೂ ಬೆಣ್ಣೆ ತಂದು ಕೊಡುವ ನೆಪದಲ್ಲಿ ಚಿನ್ನದ ವ್ಯಾಪಾರಿ ಮನೆಯಲ್ಲಿ 1 ಕೆ.ಜಿ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಸಂಜಯ್‌ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರ ಪ್ರದೇಶದ ಮುರಾದ್‌ ನಗರದ ಚಾಚಾಜಿ (51) ಬಂಧಿತ ಆರೋಪಿ. ದೂರುದಾರರು ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸಿ, ಆರೋಪಿ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಆರೋಪಿ ಚಾಚಾಜಿ ಮತ್ತೆ ನಗರಕ್ಕೆ ಬಂದ ಬಗ್ಗೆ ಮಾಹಿತಿ ಪಡೆದು ಆತನನ್ನು ಬಂಧಿಸಲಾಗಿದೆ.

ಆರೋಪಿಯಿಂದ 45 ಲಕ್ಷ ರೂ. ಮೌಲ್ಯದ 1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ತಲೆ ಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ರಾಮ್‌ಪಾಲ್‌ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಪರಿಚಯವಿರುವ ಚಿನ್ನದ ವ್ಯಾಪಾರಿಗಳು ಸೇರಿ ಹಲವರಿಗೆ ದೇಸಿ ಬೆಣ್ಣೆ ಹಾಗೂ ತುಪ್ಪ ಮಾರಾಟ ಮಾಡುವುದಾಗಿ ಆರೋಪಿ ತಿಳಿಸಿದ್ದಾನೆ. ಅದೇ ರೀತಿ ಕಳೆದ ಆಗಸ್ಟ್‌ನಲ್ಲಿ ಗೆದ್ದಲಹಳ್ಳಿ ನಿವಾಸಿ ಅನಿಲ್‌ ಕುಮಾರ್‌ ಜೈನ್‌ ಮನೆಗೆ ಹೋದ ಇಬ್ಬರು ಆರೋಪಿಗಳು, ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next