Advertisement
ಏನೇನು ನಿರೀಕ್ಷೆ?: ವಿಮಾನ ನಿಲ್ದಾಣ, ಐಐಟಿ, ಕೇಂದ್ರಿಯ ವಿವಿ, ಆನೆ ಕಾರಿಡಾರ್, ಹಾಸನ – ಬೇಲೂರು – ಚಿಕ್ಕಮಗಳೂರು – ಶೃಂಗೇರಿ ರೈಲು ಮಾರ್ಗ, ಚಳ್ಳಕೆರೆ – ತುರುವೇಕೆರೆ, ಕೆ.ಬಿ.ಕ್ರಾಸ್ ,ಚನ್ನರಾಯಟ್ಟಣ ರೈಲು ಮಾರ್ಗ, ಅರಸೀಕೆರೆ ರೈಲು ನಿಲ್ದಾಣದ ಅಭಿವೃದ್ಧಿ, ಬೆಂಗಳೂರು – ಹಾಸನ – ಮಂಗಳೂರು, ಅರಸೀಕೆರೆ – ಹಾಸನ- ಮೈಸೂರು ನಡುವೆ ಹೊರ ರೈಲುಗಳ ಸಂಚಾರ, ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ನಲ್ಲಿ ಜೈಕಾ ನೆರವಿನ ಚತುಷ್ಪಥ ಮೇಲ್ಸೇತುವೆ ಮತ್ತು ಸುರಂಗ ಮಾರ್ಗದ ನಿರ್ಮಾಣ ಹಾಗೂ ಹಾಸನ ಸ್ಮಾರ್ಟ್ಸಿಟಿ, ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣ ಯೋಜನೆ ಮಂಜೂರಾತಿ.
Related Articles
Advertisement
ಸ್ಮಾರ್ಟ್ ಸಿಟಿ: ಸ್ವತ್ಛ ಭಾರತ್ ಘೋಷಣೆಯಡಿ ಹಾಸನ ನಗರ 2ನೇ ಸ್ಥಾನವನ್ನು 2 ವರ್ಷಗಳ ಹಿಂದೆ ಪಡೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳನ್ನು ಘೋಷಣೆ ಮಾಡಿದರೆ ಹಾಸನವೂ ಸೇರಲಿ ಎಂಬ ಆಸೆ ಹಾಸನದ ನಾಗರಿಕರದ್ದು. ಹಾಸನದ ಕೈಗಾರಿಕಾಭಿವೃದ್ಧಿ ಕೇಂದ್ರ ಹಾಗೂ ವಿಶೇಷ ಆರ್ಥಿಕ ವಲಯವೂ ನಿರ್ಮಾಣ ವಾಗಿರುವುದರಿಂದ ಕೈಗಾರಿಕಾಭಿವೃದ್ಧಿಗೆ ಪೂರಕ ಘೋಷಣೆಗಳ ನಿರೀಕ್ಷೆಯಿದೆ. ಹಾಸನಕ್ಕೆ ಐಐಟಿ ಬೇಡಿಕೆ ಹಳೆಯದು. ಈಗ ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗಿದೆ. ಆದರೆ ಐಐಟಿ ಯಾಗಿ ಕಾಯ್ದಿರಿಸಿದ 1000 ಎಕರೆ ಭೂಮಿ ಐಐಟಿ ನಿರೀಕ್ಷೆಯಲ್ಲಿದೆ. ಹಾಗೆಯೇ ಕೇಂದ್ರೀಯ ವಿವಿ ಬೇಡಿಕೆಯೂ ಹಳೆಯದು. ಈ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವಾಗಬಹುದೇ ಎಂಬ ಸಣ್ಣ ಆಸೆಯಂತೂ ಜಿಲ್ಲೆಯ ಜನರಲ್ಲಿದೆ. ಮೆಗಾಡೇರಿ: ಹಾಸನ ಹಾಲು ಒಕ್ಕೂಟವು ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನ ದಲ್ಲಿದೆ. ಮೆಗಾಡೇರಿ ಸ್ಥಾಪನೆ 320 ಕೋಟಿ ರೂ. ಯೋಜನೆಗೆ ಕೇಂದ್ರ ಸರ್ಕಾರ, ಎನ್ಡಿಡಿಬಿ ನೆರವು ಕೋರಿ 1 ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇತ್ತೀಚೆಗೆ ಕೇಂದ್ರ ಕೃಷಿ ಸಚಿವರನ್ನು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರು ಭೇಟಿಯಾಗಿ ಆರ್ಥಿಕ ನೆರವು ಕೋರಿದ್ದಾರೆ. ಈ ಬಜೆಟ್ನಲ್ಲಿ ನೆರವು ಘೋಷಣೆಯಾಗಬಹುದೆಂಬ ನಂಬಿಕೆಯಿದೆ. ಬರುವುದೇ ವಿಮಾನ ನಿಲ್ದಾಣ ಇದು ಹಾಸನದ ಜನರ ದಶಕಗಳ ಬೇಡಿಕೆ. ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಪೂರ್ಣಗೊಂಡಿದೆ. ಶಿಲಾನ್ಯಾಸವೂ ನಡೆದಿತ್ತು. ಆದರೆ ಇದುವರೆಗೂ ವಿಮಾನ ನಿಲ್ದಾಣ ನಿರ್ಮಾಣವಾಗಿಲ್ಲ. ನಾಗರಿಕ ವಿಮಾನಯಾನಕ್ಕಿಂತ ಕಾರ್ಗೋ ವಿಮಾನಗಳ ಹಾರಾಟ ಹಾಗೂ ವಿಮಾನಗಳ ದುರಸ್ತಿ ಉದ್ದೇಶದ ವಿಮಾನ ನಿಲ್ದಾಣ ನಿರ್ಮಾಣದ ಘೋಷಣೆ ಕೇಂದ್ರ ಬಜೆಟ್ನಲ್ಲಿ ಆಗಬಹುದೇ ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದು. ಎನ್. ನಂಜುಂಡೇಗೌಡ