Advertisement

ಪಡಿತರ ವಿತರಣೆಗೂ ಇನ್ನು ಆಧಾರ್‌ ಕಾರ್ಡ್‌ ಕಡ್ಡಾಯ

03:45 AM Feb 10, 2017 | Team Udayavani |

ನವದೆಹಲಿ: ಎಲ್‌ಪಿಜಿ, ಮೊಬೈಲ್‌ ಸಿಮ್‌ ಆಯ್ತು. ಇದೀಗ ಪಡಿತರ ಆಹಾರ ಧಾನ್ಯ ವಿತರಣೆಗೂ ಆಧಾರ್‌ ಕಡ್ಡಾಯವಾಗಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಗುರುವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. 

Advertisement

ಕೇಂದ್ರ ಆಹಾರ ಭದ್ರತಾ ಕಾಯ್ದೆಯಡಿಗೆ ದೇಶದ ಎಲ್ಲ ಬಡವರಿಗೂ ಪಡಿತರ ಧಾನ್ಯ ವಿತರಿಸಲಾಗುತ್ತಿದ್ದು, ರಿಯಾಯಿತಿ ದರದ ಆಹಾರ ಧಾನ್ಯ ಪಡೆಯಬೇಕಾದರೆ ಆಧಾರ್‌ ಬೇಕಾಗಿದೆ. ಒಂದು ವೇಳೆ ಆಧಾರ್‌ ಹೊಂದಿಲ್ಲವಾದರೆ, ಜೂ.30ರೊಳಗೆ ಮಾಡಿಸಿಕೊಂಡು, ಪಡಿತರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಕಳೆದ ನವೆಂಬರ್‌ನಲ್ಲಷ್ಟೇ ದೇಶಾದ್ಯಂತ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯವನ್ನು 1ರಿಂದ 3 ರೂಪಾಯಿಗೆ ನೀಡಲಾಗುತ್ತಿದೆ. ಇದು 80 ಕೋಟಿ ಮಂದಿಗೆ ತಲುಪಿದೆ. ಈ ಅಧಿಸೂಚನೆಯು ಫೆ.8 ರಿಂದಲೇ ದೇಶಾದ್ಯಂತ ಜಾರಿಗೆ ಬಂದಿದ್ದು, ಎಲ್ಲರೂ ಕಡ್ಡಾಯವಾಗಿ ಆಧಾರ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಲೇಬೇಕಿದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮೇಘಾಲಯಗಳಲ್ಲಿ ಸದ್ಯಕ್ಕೆ ಇದು ಜಾರಿಗೆ ಬರಲ್ಲ. 

ಇದುವರೆಗೆ ಆಧಾರ್‌ ನೋಂದ‌ಣಿ ಮಾಡಿಸಿಕೊಳ್ಳದೇ ಇರುವವರು ಜೂ.30ರೊಳಗೆ ಸೇರಿಕೊಳ್ಳಬೇಕು. ಇಲ್ಲದಿದ್ದರೆ ರಿಯಾಯಿತಿ ದರದಲ್ಲಿ ಪಡಿತರ ಸಿಗುವುದು ಅಸಾಧ್ಯ ಎಂದು ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next