Advertisement

ಹೊನ್ನಾವರದಲ್ಲಿ 3ನೇ ದಿನವೂ ಸ್ವಯಂ ಘೋಷಿತ ಬಂದ್‌

06:30 AM Dec 10, 2017 | Team Udayavani |

ಹೊನ್ನಾವರ(ಉತ್ತರ ಕನ್ನಡ): ಗಲಭೆಯಲ್ಲಿ ನಾಪತ್ತೆಯಾದ ತರುಣ ಪರೇಶ್‌ ಮೇಸ್ತ ನಿಗೂಢ ಸಾವು, ನಂತರದ ಬೆಳವಣಿಗೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಪ್ರವೇಶ, ಉದ್ರಿಕ್ತ ವಾತಾವರಣದಿಂದ ಬಸವಳಿದ ಹೊನ್ನಾವರದಲ್ಲಿ ಮೂರನೇ ದಿನವೂ ಸ್ವಯಂ ಘೋಷಿತ ಬಂದ್‌ ಮುಂದುವರಿದಿದೆ.

Advertisement

ಗಲಭೆಯಿಂದ ಕಂಗೆಟ್ಟಿರುವ ಹೊನ್ನಾವರ ಪಟ್ಟಣ ಆತಂಕದ ಛಾಯೆಯೊಂದಿಗೆ ಜನಸಂಚಾರವಿಲ್ಲದೆ ನಿಸ್ತೇಜವಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಗ್ರಾಮೀಣ ಬಸ್‌ ಸಂಚಾರಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಶಾಲಾ ಕಾಲೇಜುಗಳ ರಜೆ ಘೋಷಣೆ ಮೂರನೇ ದಿನವೂ ಮುಂದುವರಿದಿದ್ದು, ಜನಸಂಚಾರವೂ ವಿರಳವಾಗಿ ಪಟ್ಟಣ ಬಿಕೋ ಎನ್ನುತ್ತಿತ್ತು.ತಾಲೂಕಿನ ಕವಲಕ್ಕಿ, ವಲ್ಕಿ, ಹಡಿನಬಾಳ, ಅರೇಅಂಗಡಿ, ಕಾಸರಕೋಡ ಸೇರಿ ಅಲ್ಲಲ್ಲಿ ಕೆಲ ಗುಂಪುಗಳಿಂದ ಮನೆಗಳಿಗೆ ಕಲ್ಲು ತೂರಾಟ ನಡೆದಿದ್ದು, ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಈ ವೇಳೆ ಫೋಟೋ ತೆಗೆಯಲು ಹೋದ ವರದಿಗಾರನ ಮೇಲೆ ಹಲ್ಲೆ ಮಾಡಲಾಗಿದೆ. ಪಟ್ಟಣದಲ್ಲಿ ಪೊಲೀಸ್‌ ಬಂದೋಬಸ್ತ್ ಮುಂದುವರಿದಿದೆ.

ವರದಿಗಾರನ ಮೇಲೆ ಹಲ್ಲೆ, ಬೈಕ್‌ ಜಖಂ: ಗಲಭೆಗೆ ಸಂಬಂಧಿ ಸಿ ಗುಂಪೊಂದು ಪುಂಡಾಟಿಕೆ ನಡೆಸುತ್ತಿರುವುದನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ವರದಿಗಾರನ ಮೇಲೆ ಹಲ್ಲೆ ನಡೆಸಿ, ಬೈಕ್‌ ಜಖಂಗೊಳಿಸಿರುವ ಘಟನೆ ತಾಲೂಕಿನ ಹಡಿನಬಾಳದಲ್ಲಿ ನಡೆದಿದೆ. ಹಲ್ಲೆಗೊಳಗಾಗಿರುವ ವರದಿಗಾರ ಪ್ರೊ.ಎಂ.ಜಿ. ಹೆಗಡೆ ಈ ಕುರಿತು ಪಟ್ಟಣದಲ್ಲಿ ಹಾಜರಿದ್ದ ಎಸ್ಪಿ ವಿನಾಯಕ ಪಾಟೀಲ್‌ರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next