Advertisement

ಸೀಟು ಬಿಸಿ ಮಾಡಬಹುದು ಅಷ್ಟೆ: ಸಚಿವ ಸ್ಥಾನದ ಆಸೆ ಕೈಬಿಟ್ಟ ಎಂ.ಪಿ.ಕುಮಾರಸ್ವಾಮಿ

05:30 PM May 12, 2022 | Team Udayavani |

ಚಿಕ್ಕಮಗಳೂರು: ಎಂಟು ತಿಂಗಳಲ್ಲಿ ಸೀಟು ಬಿಸಿ ಮಾಡಬಹುದು ಅಷ್ಟೆ, ಕುರ್ಚಿ ಮೇಲೆ ಕೂರಬಹುದು ಅಷ್ಟೆ, ಕ್ರಾಂತಿಕಾರಿ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸಚಿವ ಸ್ಥಾನದ ಆಸೆ ಕೈಬಿಟ್ಟಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ಸಿಕ್ಕರೂ, ಈಗ ಎಂಟು ತಿಂಗಳಲ್ಲಿ ಸಾಧನೆ ಮಾಡಲು ಆಗುವುದಿಲ್ಲ.
ಕ್ಷೇತ್ರದಲ್ಲಿ ತುಂಬಾ ಕೆಲಸ ಇದೆ, ಸಚಿವ ಸ್ಥಾನ ಕೊಡುವುದು-ಬಿಡುವುದು ವರಿಷ್ಠರಿಗೆ ಬಿಟ್ಟದ್ದು.ಮಂತ್ರಿಗಿರಿಗಾಗಿ ಒತ್ತಡ ಮಾಡಲು ಹೋಗುವುದಿಲ್ಲ.
ಲಾಬಿಗಾಗಿ ದೆಹಲಿಗೆ ಹೋಗಿಲ್ಲ, ಬೇರೆ ಕೆಲಸದ ನಿಮ್ಮಿತ್ತ ಗಡ್ಕರಿ ಅವರ ಭೇಟಿಗೆ ಹೋಗಿದ್ದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ – ಡಿಕೆಶಿ ಜಗಳದಿಂದಲೇ ಬಿಜೆಪಿಗೆ 50ಕ್ಕೂ ಹೆಚ್ಚು ಸೀಟು ಬರಲಿದೆ : ಕಟೀಲ್

ಮಂತ್ರಿಗಿರಿ ಬೇಡ ಅಂತಲ್ಲ,‌ಆಸೆ ಇರುವವರಿಗೆ ಮಾಡಲಿ ಎಂದು ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next