Advertisement

ಕೋವಿಡ್ ಪರಿಹಾರ ನಿಧಿಗೆ ವೈದ್ಯರಿಂದ ಸಹಾಯ ಹಸ್ತ

06:34 PM Apr 18, 2020 | Naveen |

ತಾಳಿಕೋಟೆ: ಪಟ್ಟಣದ ವೈದ್ಯರು ಹಾಗೂ ರಕ್ತ ತಪಾಸಣಾ ಕೇಂದ್ರದವರು ಕೂಡಿ ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 76 ಸಾವಿರ ರೂ. ಚೆಕ್‌ನ್ನು ತಹಶೀಲ್ದಾರ್‌ ಅನಿಲಕುಮಾರ ಢವಳಗಿ ಅವರಿಗೆ ಸಲ್ಲಿಸಿದರು.

Advertisement

ಈ ವೇಳೆ ಡಾ| ರವಿ ಅಗರವಾಲ ಮಾತನಾಡಿ, ಕೋವಿಡ್ ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಜನರ ಸಹಕಾರವೂ ಅಗತ್ಯವಾಗಿದೆ. ಸರ್ಕಾರದ ಸೂಚನೆಯಂತೆ ಲಾಕ್‌ಡೌನ್‌ ಪಾಲನೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದರು.

ಡಾ| ವಿ.ಎಸ್‌. ಕಾರ್ಚಿ, ಡಾ| ನಜೀರ್‌ ಕೊಳ್ಯಾಳ, ಡಾ| ಐ.ಬಿ. ತಳ್ಳೋಳ್ಳಿ, ಡಾ| ಗಿರೀಶ ಯಾದವಾಡ, ಡಾ| ಆನಂದ ಭಟ್‌, ಡಾ| ಎನ್‌.ಎಲ್‌. ಶೆಟ್ಟಿ, ಡಾ| ಡೋಣಿ, ಡಾ| ಶಬ್ಬೀರ್‌, ಡಾ| ಶ್ರೀಶೈಲ ಬಿರಾದಾರ, ಡಾ| ಸುರೇಶ ಹಂಚಾಟೆ, ಡಾ| ಪ್ರಭುಗೌಡ ಬಿರಾದಾರ, ರಕ್ತ ತಪಾಸಣಾ ಕೇಂದ್ರದ ಸದಸ್ಯರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next