Advertisement

ಮತ್ತೆ ನಾಲ್ವರು ಬಾಲಕರ ರಕ್ಷಣೆ

06:00 AM Jul 10, 2018 | Team Udayavani |

ಬ್ಯಾಂಕಾಕ್‌: ಕಳೆದ ಹದಿನೈದು ದಿನಗಳಿಂದ ಥಾಯ್ಲೆಂಡ್‌ನ‌ ಗುಹೆಯಲ್ಲಿ ಸಿಲುಕಿಕೊಂಡಿದ್ದ ಬಾಲಕರ ಫ‌ುಟ್‌ಬಾಲ್‌ ತಂಡದ 12 ಸದಸ್ಯರು ಹಾಗೂ ಕೋಚ್‌ ಪೈಕಿ ಸೋಮವಾರ ನಾಲ್ವರನ್ನು ರಕ್ಷಿಸಲಾಗಿದೆ. ಇದರಿಂದಾಗಿ ಒಟ್ಟು ಎಂಟು ಬಾಲಕರನ್ನು ಗುಹೆಯಿಂದ ಹೊರಕರೆತಂದಂತಾಗಿದೆ. ಇನ್ನೂ ನಾಲ್ಕು ಬಾಲಕರು ಹಾಗೂ ಕೋಚ್‌ ಗುಹೆಯಲ್ಲೇ ಇದ್ದಾರೆ. ಬಾಲಕರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಸೋಮವಾರ ಹೊರಕರೆತಂದ ನಾಲ್ವರು ಬಾಲಕರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. 90ಕ್ಕೂ ಹೆಚ್ಚು ಮುಳುಗುತಜ್ಞರು ಇದ್ದರು.

Advertisement

ವಿನಾಯಿತಿ: ಮುಂದಿನ ವಾರ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದ್ದು, ಇದರಿಂದ ಮಕ್ಕಳಿಗೆ ವಿನಾಯಿತಿ ನೀಡಲಾಗಿದೆ. 15 ದಿನಗಳವರೆಗೆ ಶಾಲೆಯ ಪಾಠ ತಪ್ಪಿದ್ದಕ್ಕಾಗಿ ವಿಶೇಷ ಟ್ಯೂಷನ್‌ ನೀಡಲು ಶಾಲೆಗಳು ನಿರ್ಧರಿಸಿವೆ. 

ಬಾಲಕಿ ಶೋಧಕ್ಕೆ 700 ಮಂದಿ
ಹಿಮಾಚಲ ಪ್ರದೇಶದ ಸಿಮೌìರ್‌ ಜಿಲ್ಲೆ ಯಲ್ಲಿ  ಒಂದು ವಾರದಿಂದ ಕಳೆದು ಹೋಗಿ ರುವ ಆರು ವರ್ಷದ ಬಾಲಕಿಗಾಗಿ ಭಾರಿ ಶೋಧ ಕಾರ್ಯ ನಡೆದಿದೆ. ಭಾನುವಾರದಿಂದ 15 ಗ್ರಾಮಗಳ ಸುಮಾರು 700ಕ್ಕೂ ಹೆಚ್ಚು ಜನರು ಚುರ್ಧರ್‌ ಪರ್ವತದಲ್ಲಿ ಹುಡುಕಾಟ ನಡೆಸಿದ್ದಾರೆ. ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆದಿದೆ. ಜನರು ಈ ಹುಡಕಾಟಕ್ಕೆ ಯಾವ ಪರಿ ಪ್ರತಿಸ್ಪಂದಿಸಿದ್ದಾರೆಂದರೆ ಜನರೆಲ್ಲರೂ ತಮ್ಮ ಬೇರೆಲ್ಲ ಕೆಲಸವನ್ನು ಬಿಟ್ಟು ಬೆಟ್ಟವೇರಿದ್ದಾರೆ. ರವಿವಾರದಿಂದ ಇಲ್ಲಿನ ಮಾರುಕಟ್ಟೆಯಲ್ಲೂ ಜನಸಂಚಾರವಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next