Advertisement

ಪ್ರತ್ಯೇಕತಾವಾದಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ

12:14 AM Mar 20, 2022 | Team Udayavani |

ಜಮ್ಮು: ರಾಷ್ಟ್ರೀಯ ತನಿಖೆ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ, ಕಾಶ್ಮೀರ ಪ್ರತ್ಯೇಕತಾವಾದಿ ಉಗ್ರರ ಮೇಲೆ ದೋಷಾರೋಪಪಟ್ಟಿ ಸಲ್ಲಿಸುವಂತೆ ಆದೇಶಿಸಿದೆ.

Advertisement

ಪಾಕಿಸ್ಥಾನ ಮೂಲದ ಲಷ್ಕರ್‌ ಎ ತಯ್ಯಬಾ ಉಗ್ರ ಸಂಘಟನೆ ಸ್ಥಾಪಕ ಹಫೀಜ್‌ ಸಯೀದ್‌, ಹಿಜ್ಬುಲ್‌ ಮುಜಾ ಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಹುದ್ದೀನ್‌, ಯಾಸಿನ್‌ ಮಲಿಕ್‌, ಶಬ್ಬೀರ್‌ ಶಾ, ಮಸರತ್‌ ಅಲಮ್‌ ಮತ್ತು ಇನ್ನೂ 15 ಮಂದಿಯ ಮೇಲೂ ದೋಷಾರೋಪ ಪಟ್ಟಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಇವರು ಕಾಶ್ಮೀರ ಪ್ರತ್ಯೇಕತಾವಾದಿ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದಾರೆ ಎನ್ನುವುದು ಎನ್‌ಐಎ ನ್ಯಾಯಾಲಯ ದಲ್ಲಿ ಸಾಬೀತಾಗಿದೆ. 2017ರಲ್ಲಿ ಜಮ್ಮುಕಾಶ್ಮೀರ ದಲ್ಲಿ ನಡೆದಿರುವ ಉಗ್ರರ ಪ್ರತ್ಯೇಕತಾವಾದಿ ಚಟುವಟಿಕೆಗಳು ವ್ಯವಸ್ಥಿತ ಪಿತೂರಿ. ಪಾಕಿಸ್ಥಾನ ಮತ್ತು ಅದರ ಸಂಸ್ಥೆಗಳು ಉಗ್ರರಿಗೆ ಹಣಕಾಸು ನೆರವು ನೀಡಿವೆ, ಅದ ಕ್ಕಾಗಿ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next