Advertisement
ಶನಿವಾರ ತಡರಾತ್ರಿ 2 ಗಂಟೆಯ ವೇಳೆಗೆ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರ ಗುಂಪೊಂದು ಸಿಆರ್ಪಿಎಫ್ ತರಬೇತಿ ಕೇಂದ್ರದ ಮೇಲೆ ಏಕಾಏಕಿ ದಾಳಿ ನಡೆಸಿತು. ಆ ಉಗ್ರರ ಬಳಿ ಅಂಡರ್ ಬ್ಯಾರೆಲ್ ಗ್ರೆನೇಡ್ಗಳು ಮತ್ತು ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳೂ ಇದ್ದವು. ಗುಂಡಿನ ದಾಳಿ ಯಿಂದಾಗಿ ಶಿಬಿರದಲ್ಲಿದ್ದ ನಾಲ್ವರು ಯೋಧರು ಹುತಾ ತ್ಮ ರಾದರೆ, ಮತ್ತೂಬ್ಬರು ಹೃದಯಾಘಾತದಿಂದ ಮೃತಪಟ್ಟರು. ಇನ್ನೂ ಮೂವರು ಸೇನಾನಿಗಳು ಗಾಯಗೊಂಡರು ಎಂದು ಸಿಆರ್ಪಿಎಫ್ ವಕ್ತಾರ ರಾಜೇಶ್ ಯಾದವ್ ತಿಳಿಸಿದ್ದಾರೆ.
Related Articles
ಸಿಆರ್ಪಿಎಫ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಬಹುದು ಎಂಬ ನಿರ್ದಿಷ್ಟ ಅಲರ್ಟ್ ಹೊರ ತಾಗಿಯೂ ದಾಳಿ ನಡೆದಿದೆ. ದಾಳಿ ಕುರಿತು ಮೊದಲೇ ಗುಪ್ತಚರ ಸಂಸ್ಥೆಗಳಿಂದ ಸ್ಪಷ್ಟ ಮಾಹಿತಿ ಸಿಕ್ಕಿತ್ತು ಎಂದು ಹಿರಿಯ ಪೊಲೀಸ್ ಅಧಿ ಕಾರಿ ಎಸ್.ಪಿ.ವೇದ್ ಅವರೇ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸೇನಾ ಶಿಬಿರ ಗಳನ್ನು ಗುರಿಯಾಗಿಸಿಕೊಂಡು ಇನ್ನಷ್ಟು ದಾಳಿ ನಡೆಯುವ ಸಾಧ್ಯತೆಯ ಬಗ್ಗೆಯೂ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
Advertisement
ಪ್ರಧಾನಿಯ ವಿದೇಶಿ ನೀತಿಯ ವೈಫಲ್ಯಕ್ಕೆ ಸಾಕ್ಷಿ: ಕಾಂಗ್ರೆಸ್ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂ ಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ. ಇದು ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯಲ್ಲಿನ ವೈಫಲ್ಯಕ್ಕೆ ಸಾಕ್ಷಿ ಎಂದು ಹೇಳಿದೆ. ಪದೇ ಪದೆ ನಡೆಯುತ್ತಿರುವ ಇಂಥ ದಾಳಿಗಳು ದೇಶವಿರೋಧಿ ಶಕ್ತಿಗಳಿಗೆ ಭಾರತದ ಬಗ್ಗೆ ಭಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಇವೆ. ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು, ಭಾರತವೊಂದು ಬಲಿಷ್ಠ ರಾಷ್ಟ್ರ ಎನ್ನುತ್ತಾರೆ. ಆದರೆ, ಗಡಿಯಲ್ಲಿನ ಕದನ ವಿರಾಮ ಉಲ್ಲಂಘನೆಗಳು, ಸಾವು-ನೋವುಗಳ ಸಂಖ್ಯೆ ವೃದ್ಧಿಸುತ್ತಲೇ ಇವೆ. ದೇಶದ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವೆಲ್ಲರೂ ಬಯಸು ತ್ತೇವೆ. ಆದರೆ, ಈಗಿನ ಬೆಳವಣಿಗೆಗಳು ಪ್ರಧಾನಿಯ ವಿದೇಶಿ ನೀತಿಯಲ್ಲಿನ ವೈಫಲ್ಯವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಷ್ಮಿತಾ ದೇವ್ ಆರೋಪಿಸಿದ್ದಾರೆ.