Advertisement

ತೆಂಕ ಎಕ್ಕಾರ್‌ನಲ್ಲಿ ಚಿರತೆ ದಾಳಿ: ಸೂಕ್ತ ಕ್ರಮಕ್ಕೆ ಸ್ಥಳೀಯರ ಆಗ್ರಹ

12:13 AM Jan 12, 2023 | Team Udayavani |

ಬಜ್ಪೆ: ಪೆರ್ಮುದೆ ತೆಂಕ ಎಕ್ಕಾರ್‌ನಲ್ಲಿ ಚಿರತೆ ದಾಳಿ ನಡೆಸಿದೆ. ಕೆಲವು ದಿನಗಳ ಹಿಂದೆ ನಾಯಿಯನ್ನು ಚಿರತೆಗಳು ಅಟ್ಟಿಸಿಕೊಂಡು ಬಂದದ್ದು ಸಿ.ಸಿ. ಟಿವಿಯಲ್ಲಿ ದಾಖಲಾಗಿತ್ತು. ಜ. 11ರಂದು ಹಾಡಹಗಲೇ ಕರುವನ್ನು ಹಿಡಿಯುವ ಪ್ರಯತ್ನವನ್ನು ಚಿರತೆ ಮಾಡಿದೆ.

Advertisement

ಮಂಗಗಳು ಸದ್ದು ಮಾಡಿ ಕರುವನ್ನ ಸುತ್ತುವರಿದಿದ್ದು, ನಾಯಿಗಳು ಕೂಡ ಬೊಗಳುವ ಸದ್ದಿಗೆ ರೈತ ಪಾಸ್ಕಲ್‌ ಅವರು ಮನೆಯಿಂದ ಓಡಿ ಬಂದಿರುವ ಕಾರಣ ಚಿರತೆ ಅಲ್ಲಿಂದ ಓಡಿದೆ. ಈವರೆಗೆ ಕೇವಲ ನಾಯಿಗಳನ್ನು ಮಾತ್ರ ಕೊಂಡೊಯ್ಯುತ್ತಿದ್ದ ಚಿರತೆಗಳು ದನ-ಕರುಗಳ ಮೇಲೂ ದಾಳಿ ನಡೆಸಲು ಆರಂಭಿಸಿವೆ.

ಕ್ರಮಕ್ಕೆ ಆಗ್ರಹ
ಪೆರ್ಮುದೆ, ತೆಂಕ ಎಕ್ಕಾರು ಗ್ರಾಮಗಳು ಗುಡ್ಡ, ಕಾಡು, ಕೃಷಿ ತೋಟ ಪ್ರದೇಶವಾಗಿದ್ದು, ಜನರು ನಡೆದಾಡಲು ಹೆದರುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು ಶಾಲೆಗೆ ನಡೆದುಕೊಂಡು ಹೋಗು ತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹೆಚ್ಚಿನ ಹಾನಿಯಾಗುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next