Advertisement

ಟೆಂಪೋ-ಕಾರು ಡಿಕ್ಕಿ: ನಾಲ್ವರ ದುರ್ಮರಣ

10:53 PM Jan 14, 2020 | Team Udayavani |

ಧಾರವಾಡ: ಟೆಂಪೋ -ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮಗು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಗರ ಹೊರವಲಯದ ಯರಿಕೊಪ್ಪ ಗ್ರಾಮದ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದ ರುದ್ರಪ್ಪ ಮರಕುರಿ (65), ಈರಮ್ಮ ಮರಕುರಿ (55), ಮಂಜುನಾಥ ಮರಕುರಿ(35), ಶಿವರಾಜ ಅಳವಂಡಿ (2) ಎಂದು ಗುರುತಿಸಲಾಗಿದೆ.

Advertisement

ಇವರು ಕಾರಿನಲ್ಲಿ ಹುಬ್ಬಳ್ಳಿ ಯಿಂದ-ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟೆಂಪೋಗೆ ಕಾರು ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಮಗು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next