Advertisement

ದೇಗುಲಗಳಲ್ಲಿ ಕಳ್ಳತನ ಪ್ರಕರಣ: ಆರೋಪಿಗೆ ಜಾಮೀನು ಮಂಜೂರು

06:31 PM Sep 09, 2022 | Team Udayavani |

ಗಂಗೊಳ್ಳಿ: ಇಲ್ಲಿನ ಪೊಲೀಸ್‌ ಠಾಣೆ ವ್ಯಾಪ್ತಿಯ ಮರವಂತೆ ದೇವಸ್ಥಾನ ಸೇರಿದಂತೆ ಬೈಂದೂರು, ಕೊಲ್ಲೂರು ಠಾಣೆ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಗಳ ಆರೋಪಿ ಕರುಣಾಕರ ದೇವಾಡಿಗನಿಗೆ ಕುಂದಾಪುರ ಪ್ರಧಾನ ಸಿವಿಲ್‌ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

Advertisement

ಆರೋಪಿಯು ಮಧ್ಯಾಹ್ನದ ವೇಳೆಗೆ ಕತ್ತಿ ಹಿಡಿದು ಮರವಂತೆ ದೇವಸ್ಥಾನದ ಬೀಗ ಒಡೆದು ದೇವಸ್ಥಾನದ ಒಳಗೆ ಹೋಗಿ ಕಳ್ಳತನ ಮಾಡಿರುವುದು ದೇವಸ್ಥಾನದ ಸಿ.ಸಿ. ಕೆಮರಾದಲ್ಲಿ ದಾಖಲಾಗಿತ್ತು. ಇದಕ್ಕೂ ಮುಂಚೆ ಇತರ ದೇವಸ್ಥಾನಗಳಲ್ಲೂ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆಯನ್ನು ಕರುಣಾಕರ ನೀಡಿದ್ದ. ಆರೋಪಿಯ ಪರ ಕುಂದಾಪುರದ ನ್ಯಾಯವಾದಿಗಳಾದ ಕೆ.ಎಂ. ಇಲಿಯಾಸ್‌ ಮತ್ತು ಮುಳ್ಳಿಕಟ್ಟೆ ಚರಣ್‌ರಾಜ್‌ ಮೆಂಡನ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next