Advertisement

ಗುಡಿಬಂಡೆ: ಎಲ್ಲೋಡು ಲಕ್ಷ್ಮಿ ಅದಿನಾರಾಯಣ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಕಳ್ಳರು

12:07 PM Mar 05, 2023 | Team Udayavani |

ಗುಡಿಬಂಡೆ: ತಾಲೂಕಿನ ಎಲ್ಲೋಡು ಗ್ರಾಮದ ಇತಿಹಾಸ ಪ್ರಸಿದ್ಧ ಲಕ್ಷ್ಮಿ ಅದಿನಾರಾಯಣ ಸ್ವಾಮಿ ದೇವಸ್ಥಾನದ ಹುಂಡಿ ಕಳವು ಮಾಡಿ ನಗದು ದೋಚಿರುವ ಘಟನೆ ನಡೆದಿದೆ.

Advertisement

ಇತ್ತೀಗಷ್ಟೇ ಶ್ರೀ ಲಕ್ಷ್ಮಿ ಅದಿನಾರಾಯಣ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಿತ್ತು. ಜಾತ್ರೆ ನಡೆದು ಒಂದು ತಿಂಗಳು ಮುಗಿವುದರೊಳಗಯೇ ದೇವಸ್ಥಾನದ ಹುಂಡಿಗೆ ಕಳ್ಳರು ಕನ್ನ ಹಾಕಿದ್ದಾರೆ. ಶನಿವಾರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು, ಹುಂಡಿಯನ್ನು ಒಡೆದು ಅದರಲ್ಲಿದ್ದ ನಗದನ್ನು ದೋಚಿಕೊಂಡು ಹೋಗಿದ್ದಾರೆ.

ಹುಂಡಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ನಗದು ಇರಬಹುದು ಎಂದು ತಹಶೀಲ್ದಾರ್ ಮನೀಶ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಗ್ರಾಮಲೆಕ್ಕಿಗ ಆದರ್ಶ್, ಆರ್.ಐ ಲಕ್ಷ್ಮೀನಾರಾಯಣ, ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next