Advertisement

ಹುಂಡಿ ಕಳವು ಯತ್ನ: ಆರೋಪಿಯ ಬಂಧನ

06:16 PM Jul 21, 2022 | Team Udayavani |

ಮಡಿಕೇರಿ: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಗ್ರಾಮದ ಶ್ರೀಭದ್ರಕಾಳಿ ಅಯ್ಯಪ್ಪ ದೇವಾಲಯದ ಹುಂಡಿಯನ್ನು ಒಡೆದು ಕಳವು ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಶಿವು (ಶಂಕರ) ಬಂಧಿತ ಆರೋಪಿ. ದೇವಾಲಯದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವೃತ್ತ ನಿರೀಕ್ಷಕ ಗೋವಿಂದರಾಜು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಡಿ.ಕುಮಾರ್‌, ಸಿಬ್ಬಂದಿಗಳಾದ ಪ್ರಮೋದ್‌, ಮನು, ಮಹದೇಶ್ವರ ಸ್ವಾಮಿ, ದಯಾನಂದ ಹಾಗೂ ಪ್ರಸನ್ನ ಪಾಲ್ಗೊಂಡಿದ್ದರು.

ಜು.18 ರಂದು ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next