Advertisement

12 ದೇವಸ್ಥಾನಕ್ಕೆ  1.9 ಕೋಟಿ ರೂ. ; ದೇವಸ್ಥಾನ ಅಭಿವೃದ್ಧಿ

06:04 PM Jul 28, 2022 | Team Udayavani |

ಯಮಕನಮರಡಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ತಾಲೂಕಿನ 3 ಜಿಪಂ ಕ್ಷೇತ್ರದ 12ದೇವಸ್ಥಾನಗಳಿಗೆ 1.9ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ರವೀಂದ್ರ ಹಂಜಿ ಹೇಳಿದರು.

Advertisement

ಅವರು ಪತ್ರಕರ್ತರೊಂದಿಗೆ ಮಾತನಾಡಿ, ಯಮಕನಮರಡಿ ಮತಕ್ಷೇತ್ರದ ಭೂತರಾಮಹಟ್ಟಿಯ ಶ್ರೀ ಶಿವಸೋಮೇಶ್ವರ ಮುಕ್ತಿಮಠಕ್ಕೆ 25ಲಕ್ಷ ರೂ, ಬೆನ್ನಾಳಿ ಗ್ರಾಮದ ಗಜಾನನ ಸೇವಾ ಸಮಿತಿಗೆ 5ಲಕ್ಷ ರೂ. ಕಡೋಲಿ ಗ್ರಾಮದ ಕಲಮೇಶ್ವರ ದೇವಸ್ಥಾನಕ್ಕೆ 5ಲಕ್ಷ ರೂ. ಮತ್ತು ಶ್ರೀ ದುರದುಂಡೇಶ್ವರ ದೇವಸ್ಥಾನಕ್ಕೆ 13 ಲಕ್ಷ ರೂ, ಅಗಸಗಾ ಗ್ರಾಮದ ವಿಠ್ಠಲ ದೇವಸ್ಥಾನಕ್ಕೆ 2.5ಲಕ್ಷ ರೂ.ಗಳು, ಅದೇ ಗ್ರಾಮದ ಶ್ರೀ ಕಲಮೇಶ್ವರ ದೇವಸ್ಥಾನಕ್ಕೆ 2.5ಲಕ್ಷ ರೂ, ಚಲುವೆನಟ್ಟಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ. ಮಣ್ಣಿಕೇರಿ ಗ್ರಾಮದ ಬಹ್ಮಾನಂದ ಮಠಕ್ಕೆ 5 ಲಕ್ಷ ರೂ., ಕಲಕಾಂಬ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ 5ಲಕ್ಷ ರೂ, ಮುಚ್ಚಂಡಿ ಗ್ರಾಮದ ಸಿದ್ದೇಶ್ವರ ದೇವಸ್ಥಾನಕ್ಕೆ 15 ಲಕ್ಷ ರೂ., ಅಷ್ಠೆ ಗ್ರಾಮದ ಹುಲಿಗೆವ್ವಾ ದೇವಸ್ಥಾನಕ್ಕೆ 5ಲಕ್ಷ ರೂ., ಶಿವಾಪೂರ ಗ್ರಾಮದ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಠಕ್ಕೆ 10ಲಕ್ಷ ರೂ., ಗುಗ್ರಾನಟ್ಟಿ ಗ್ರಾಮದ ಕಲಮೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಠಗಿ, ಬಸವರಾಜ ಹುಂದ್ರಿ, ಶಂಕರಗೌಡ ಮೋದಗಿ, ಹುಕ್ಕೇರಿ ಕೆಇಬಿ ಅಧ್ಯಕ್ಷ ಕಲಗೌಡ ಪಾಟೀಲ, ಉತ್ತರ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಶಿವಾನಂದ ಮಸಗುಪ್ಪಿ, ಉದಯ ನಿರ್ಮಳ, ಪ್ರಹ್ಲಾದ ನಾಯಿಕ, ಶಿವಾನಂದ ಪಡಗುರಿ, ಸುಶಾಂತ ಪರಮೋಜಿ, ಮಲ್ಲಪ್ಪಾ ಪರಮೋಜ, ಸಂಜೆಯ ಶಿಪುಕರ, ರಾಹುಲ ಹಿರೋಜಿ, ಅಪ್ಪಯ್ನಾ ಜಾಜರಿ, ಶಿವಾನಂದ ಮಸಗುಪ್ಪಿ ಮುಂತಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next