Advertisement

Telangana: 31,000 ಕೋ.ರೂ. ಬೆಳೆ ಸಾಲ ಮನ್ನಾ!

01:35 AM Jun 22, 2024 | Team Udayavani |

ಹೈದರಾಬಾದ್‌: ಮುಖ್ಯಮಂತ್ರಿ ರೇವಂತ್‌ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವು ರಾಜ್ಯದ ರೈತರ 31,000 ಕೋಟಿ ರೂ. ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಶುಕ್ರವಾರ ಘೋಷಿ ಸಿದೆ. ಸಿಎಂ ನೇತೃತ್ವದ ಸಂಪುಟ ಸಭೆ ಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

Advertisement

2018ರ ಡಿ.12ರಿಂದ 2023ರ ಡಿ.9ರ ಒಳಗೆ ರೈತರು ಪಡೆದುಕೊಂಡಿರುವ 2 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂದಾಜಿನ ಪ್ರಕಾರ, ಈ ಸಾಲದ ಮೊತ್ತ 31,000 ಕೋಟಿ ರೂ.ಗಳಾಗಬಹುದು ಎನ್ನಲಾಗಿದೆ. ಈ ಕುರಿತಂತೆ ಸಿಎಂ ರೇವಂತ್‌ ರೆಡ್ಡಿ ಮಾಹಿತಿ ನೀಡಿದ್ದು, ಬೆಳೆ ಸಾಲ ಮನ್ನಾ ಕುರಿತಾದ ನಿರ್ಧಾರ, ಅರ್ಹತ ಮಾನದಂಡಗಳು ಮತ್ತು ಇತರ ನಿಯಮವಾಳಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಂಪುಟ ಸದಸ್ಯರು ಈ ಪ್ರಸ್ತಾ ಪಕ್ಕೆ ಅನುಮೋದನೆ ಸೂಚಿಸಿದ್ದಾರೆ. ಶೀಘ್ರವೇ ಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.

ಫ‌ಲಾನುಭವಿಗಳ ಅರ್ಹತೆಗೆ ಸಂಬಂಧಿಸಿದ ನಿಯಮಗಳನ್ನು ರೂಪಿ ಸಲು ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ ನೇತೃತ್ವದ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಜು 15ರ ವೇಳೆಗೆ ಸಮಿತಿ ವರದಿ ಸಲ್ಲಿಸಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next