Advertisement
ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದ ವೇಳೆ ಹೊತ್ತಿದ್ದ ಹರಕೆ ಇದಾಗಿದ್ದು ,2014 ರಲ್ಲಿ ಪ್ರತ್ಯೇಕ ರಾಜ್ಯದ ಉದಯವಾಗಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಬಳಿಕ ಪತ್ನಿ,ಕುಟುಂಬ ಮತ್ತು ಸಂಪುಟದ ಸದಸ್ಯರೊಂದಿಗೆ ವೆಂಕಟೇಶ್ವರನ ಸನ್ನಿಧಿಗೆ ಬಂದು ಈ ಹರಕೆ ತೀರಿಸಿದ್ದಾರೆ. Related Articles
Advertisement
ಚಿನ್ನಾಭರಣಗಳ ತಯಾರಿಗೆ ಸಮಿತಿಯನ್ನೇ ರಚಿಸಲಾಗಿದ್ದು , ಈ ಹಿಂದೆ ವಾರಂಗಲ್ನ ಭದ್ರಕಾಳಿಗೆ 3.65 ಕೋಟಿ ರೂ ಮೌಲ್ಯದ 11 ಕೆ.ಜಿ. ತೂಕದ ಕಿರೀಟವನ್ನು ಹರಕೆಯ ರೂಪದಲ್ಲಿ ನೀಡಲಾಗಿತ್ತು. ವಿಜಯವಾಡದ ಕನಕ ದುರ್ಗಾ ದೇವಾಲಯಕ್ಕೆ ಚಿನ್ನದ ಮೂಗುತಿಯನ್ನು ಹರಕೆಯ ರೂಪದಲ್ಲಿ ನೀಡಿದ್ದರು.
ವೈಯಕ್ತಿಕವಾಗಿ ಹೊತ್ತ ಹರಕೆ ತೀರಿಸಲು ಮುಜರಾಯಿ ಇಲಾಖೆಯ ಅಡಿ ಬರುವ ಶಿಥಿಲಗೊಂಡಿರುವ ದೇಗುಲಗಳ ನವೀಕರಣಕ್ಕಾಗಿ ಮೀಸಲಿಡಲಾಗುವ ಕಾಮನ್ ಗುಡ್ ಫಂಡ್ನ ಹಣವನ್ನು ಬಳಸಿರುವುಕ್ಕೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.
ಎಲ್ಲಿಯಾದರೂ ತೆಲಂಗಾಣ ರಚೆನೆಯಾದ ಹೊರತಾಗಿಯೂ ಅವರು ಮುಖ್ಯಮಂತ್ರಿಯಾಗದೆ ಇದ್ದಿದ್ದರೆ ಹರಕೆ ಹೇಗೆ ತೀರಿಸುತ್ತಿದ್ದರು ಎಂದು ತೆಲಂಗಾಣ ಕಾಂಗ್ರೆಸ್ ವಕ್ತಾರ ದಾಸೋಜು ಶ್ರವಣ್ ಪ್ರಶ್ನಿಸಿದ್ದಾರೆ.