Advertisement

ನಾಳೆ ಕೆಸಿಆರ್‌ ರಾಷ್ಟ್ರೀಯ ಪಕ್ಷ ಘೋಷಣೆ?

07:50 PM Oct 03, 2022 | Team Udayavani |

ಹೈದರಾಬಾದ್‌: ತೆಲಂಗಾಣದ ಮುಖ್ಯಮಂತ್ರಿ, ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ್‌ ರಾವ್‌ ಅವರು ದಸರಾ ಕೊನೆಯ ದಿನವಾದ ಅ.5ರಂದು ತಮ್ಮ ರಾಷ್ಟ್ರೀಯ ಪಕ್ಷದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

Advertisement

ಈಗಾಗಲೇ ಕೆ.ಸಿ.ಆರ್‌ ಅವರು ಪಕ್ಷದ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ವಿನೋದ್‌ ಕುಮಾರ್‌ ಅವರು ಈ ಕುರಿಯಾಗಿ ಮಾತನಾಡಿದ್ದಾರೆ. “ರಾಷ್ಟ್ರೀಯ ಪಕ್ಷದ ಬಗ್ಗೆ ಕೆ.ಸಿ.ಆರ್‌ ಅವರು ಅ.5ರಂದು ಘೋಷಣೆ ಮಾಡಲಿದ್ದಾರೆ. ತೆಲಂಗಾಣ ರಾಷ್ಟ್ರೀಯ ಸಮಿತಿಯನ್ನು “ಭಾರತೀಯ ರಾಷ್ಟ್ರೀಯ ಸಮಿತಿ’ ಎಂದು ಬದಲಾವಣೆ ಮಾಡಲಾಗುವುದು.

ಮತ್ತೂಂದು ಪಕ್ಷ ಕಟ್ಟುವುದಿಲ್ಲ. ಆದರೆ ನಮ್ಮದೇ ಪಕ್ಷದಲ್ಲಿ ಬದಲಾವಣೆ ತರಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next