Advertisement

ತೆಲಂಗಾಣ: “ದಲಿತ ಬಂಧು’ವಿಗೆ 17, 700 ಕೋಟಿ: ಸಚಿವ ಟಿ.ಹರೀಶ್‌ ರಾವ್‌

09:15 PM Feb 06, 2023 | Team Udayavani |

ಹೈದರಾಬಾದ್‌:ತೆಲಂಗಾಣದಲ್ಲಿ ದಲಿತ ಸಮುದಾಯದ ಅಭಿವೃದ್ಧಿಗಾಗಿ “ದಲಿತ ಬಂಧು’ ಎಂಬ ಯೋಜನೆ ಪ್ರಕಟಿಸಲಾಗಿದೆ. ಅದಕ್ಕಾಗಿ 17, 700 ಕೋಟಿ ರೂ. ಮೊತ್ತವನ್ನು ಮೀಸಲಾಗಿ ಇರಿಸುವುದಾಗಿ ವಿತ್ತ ಸಚಿವ ಟಿ.ಹರೀಶ್‌ ರಾವ್‌ ಪ್ರಕಟಿಸಿದ್ದಾರೆ.

Advertisement

ಸೋಮವಾರ ಮಂಡಿಸಲಾಗಿರುವ 2023-24ನೇ ಸಾಲಿನ ಬಜೆಟ್‌ನಲ್ಲಿ ಈ ಅಂಶ ಪ್ರಸ್ತಾಪ ಮಾಡಲಾಗಿದೆ. ಅದರ ಅನ್ವಯ ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ರೂ.ವಿತ್ತೀಯ ನೆರವು ನೀಡಲಾಗುತ್ತದೆ.

ಆ ಮೊತ್ತದಲ್ಲಿ ಕುಟುಂಬದ ಆಯ್ಕೆಯ ಯಾವುದೇ ಉದ್ದಿಮೆ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಾರಿಗೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಉತ್ಪಾದನೆ ಮತ್ತು ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯಮ ತೊಡಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next