Advertisement

ಕನ್ನಡ ಕಟ್ಟಾಳು ಪಾಟೀಲ ಪುಟ್ಟಪ್ಪಗೆ ಕಂಬನಿ

02:05 PM Mar 18, 2020 | Suhan S |

ಗದಗ: ಹಿರಿಯ ಪತ್ರಕರ್ತ, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಗಲಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಸಭೆಯಲ್ಲಿ ಪಾಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಎಂ. ಶರೀಫನವರ ಮಾತನಾಡಿ, ಪಾಪು ಅವರು ಕೇವಲ ಪತ್ರಕರ್ತರಾಗಿರದೇ, ಕೆಚ್ಚೆದೆಯ ಹೋರಾಟಗಾರರೂ ಆಗಿದ್ದರು. ನಾಡಿನ ನೆಲ, ಜಲ ಹಾಗೂ ಭಾಷೆಯ ವಿಷಯಕ್ಕೆ ಧಕ್ಕೆ ಬಂದಾಗಲೆಲ್ಲ ಗಟ್ಟಿ ಧ್ವನಿಯಲ್ಲಿ ಧ್ವನಿ ಎತ್ತಿ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದರು ಎಂದು ನುಡಿನಮನ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಷ್ಟಗಿ, ಪ್ರಜಾಪಥಸಂಪಾದಕ ರಾಜು ಹೆಬ್ಬಳ್ಳಿ, ಪತ್ರಕರ್ತ ಆನಂದಯ್ಯ ವಿರಕ್ತಮಠ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತಕುಮಾರ ಹೊಂಬಾಳಿ, ಹಿರಿಯ ಪತ್ರಕರ್ತ ಗಣೇಶ ಪೈ, ರಾಮಣ್ಣ ವಗ್ಗಿ, ಅನಿಲ್‌ ತೆಂಬದಮನಿ, ಮಂಜುನಾಥ ಶಿರಸಂಗಿ, ವೀರೇಂದ್ರ ನಾಗಲದಿನ್ನಿ, ಮಹಾಲಿಂಗಯ್ಯ ಹಿರೇಮಠ, ಚಮನ್‌ ಹೊಸಮನಿ, ಶಂಕರ ಗುರಿಕಾರ, ಮಂಜುನಾಥ ರಾಠೊಡ, ಎಸ್‌.ಎಂ. ಸೈಯದ್‌, ಅಪ್ಪಾಸಾಬ ಚಿನಗುಂಡಿ, ಖಲೀಲ್‌ ಅಹಮ್ಮದ್‌ ಶೇಖ್‌, ನಾಗರಾಜ ಕಟ್ಟಿಮನಿ, ನಾಗರಾಜ ಬೆಳವಡಿ, ಪರಶುರಾಮ ಹಳ್ಳದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next