Advertisement

ಜಿಂಬಾಬ್ವೆಗೆ ಆಗಮಿಸಿದ ಟೀಮ್‌ ಇಂಡಿಯಾ: ಆಗಸ್ಟ್‌ 18ರಿಂದ 3 ಪಂದ್ಯಗಳ ಏಕದಿನ ಸರಣಿ

11:18 PM Aug 14, 2022 | Team Udayavani |

ಹರಾರೆ: ಮೂರು ಪಂದ್ಯ ಗಳ ಏಕದಿನ ಸರಣಿಗಾಗಿ ಭಾರತ ತಂಡ ಜಿಂಬಾಬ್ವೆ ರಾಜಧಾನಿ ಹರಾರೆಗೆ ಬಂದಿ ಳಿಯಿತು. ಆ. 18ರಿಂದ ಇಲ್ಲಿ 3 ಪಂದ್ಯಗಳ ಮುಖಾಮುಖಿ ಆರಂಭವಾಗಲಿದೆ.”ಅವರೀಗ ಇಲ್ಲಿದ್ದಾರೆ. ಭಾರತ ತಂಡ ಈಗಷ್ಟೇ ಹರಾರೆ ತಲುಪಿದೆ.

Advertisement

ಹರಾರೆ ಸ್ಪೋರ್ಟ್ಸ್ ಕ್ಲಬ್‌ ಅಂಗಳದಲ್ಲಿ 3 ಪಂದ್ಯಗಳು ನಡೆಯಲಿವೆ’ ಎಂದು ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ತನ್ನ ಟ್ವಿಟರ್‌ನಲ್ಲಿ ಟೀಮ್‌ ಇಂಡಿಯಾದ ಆಗಮನವನ್ನು ಸಾರಿದೆ.

ಕಡೇ ಗಳಿಗೆಯಲ್ಲಿ ಕೆ.ಎಲ್‌. ರಾಹುಲ್‌ ಫಿಟ್‌ ಆದ್ದರಿಂದ ಈ ಸರಣಿ ಯಲ್ಲಿ ಅವರು ಟೀಮ್‌ ಇಂಡಿಯಾ ನೇತೃತ್ವ ವಹಿಸಲಿದ್ದಾರೆ. ಮೊದಲ ಆಯ್ಕೆಯಲ್ಲಿ ಶಿಖರ್‌ ಧವನ್‌ಗೆ ನಾಯಕತ್ವ ನೀಡಲಾಗಿತ್ತು. ಅವರೀಗ ಉಪ ನಾಯಕರಾಗಿದ್ದಾರೆ. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ ಅವರಿಗೆಲ್ಲ ವಿಶ್ರಾಂತಿ ನೀಡಲಾಗಿದೆ. ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹರ್‌ ಏಕದಿನ ತಂಡಕ್ಕೆ ಮರಳಿದ್ದಾರೆ. ರಾಹುಲ್‌ ತ್ರಿಪಾಠಿ ಈ ತಂಡದ ಹೊಸ ಮುಖ.

ರಾಹುಲ್‌ ದ್ರಾವಿಡ್‌ ಗೈರಲ್ಲಿ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಈ ಸರಣಿಯಲ್ಲಿ ಭಾರತ ತಂಡದ ಕೋಚ್‌ ಆಗಿರಲಿದ್ದಾರೆ.

ಸತತ 2 ಕ್ಲೀನ್‌ ಸ್ವೀಪ್‌
2015ರಿಂದೀಚೆ ಭಾರತ ತಂಡದ 3ನೇ ಜಿಂಬಾಬ್ವೆ ಪ್ರವಾಸ ಇದಾಗಿದೆ. ಕೊನೆಯ ಸಲ 2018ರಲ್ಲಿ ಪ್ರವಾಸಗೈದಿತ್ತು. ಕಳೆದೆರಡೂ ಸರಣಿಗಳನ್ನು ಭಾರತ 3-0 ಅಂತರದಿಂದ ವಶಪಡಿಸಿಕೊಂಡಿತ್ತು.2015ರಲ್ಲಿ ಅಜಿಂಕ್ಯ ರಹಾನೆ, 2018ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡವನ್ನು ಮುನ್ನಡೆಸಿದ್ದರು.

Advertisement

ಭಾರತ ತಂಡ
ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್‌ ಧವನ್‌ (ಉಪ ನಾಯಕ), ಋತುರಾಜ್‌ ಗಾಯಕ್ವಾಡ್‌, ಶುಭಮನ್‌ ಗಿಲ್‌, ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್ ಠಾಕೂರ್, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್‌ಸಿರಾಜ್‌, ದೀಪಕ್‌ ಚಹರ್‌.

Advertisement

Udayavani is now on Telegram. Click here to join our channel and stay updated with the latest news.

Next