Advertisement

ಕೇದಾರನಾಥ ಸನ್ನಿಧಿಯಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ವಿಶೇಷ ಪೂಜೆ

12:36 PM Jun 18, 2022 | Team Udayavani |

ವಿಜಯಪುರ: ಕೇದಾರನಾಥ ದೇವರ ದರ್ಶನಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯ ಯುವಭಕ್ತರ ತಂಡ ಕೇದಾರನಾಥ ಸನ್ನಿಧಾನದಲ್ಲಿ ತಮ್ಮ ನೆಚ್ಚಿನ ತಾರೆ ಪವರ್ ಸ್ಡಾರ್ ಪುನಿತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.

Advertisement

ಅಪ್ಪು ಅಪ್ಪಟ ಅಭಿಮಾನಿಗಳಾದ ವಿಜಯಪುರ ಮೂಲದ ಪ್ರಶಾಂತ, ಜಗದೀಶ, ನಿಂಗಪ್ಪ, ಅಬ್ದುಲ್ ರೆಹಮಾನ್ ಇವರು ಕೇದಾರನಾಥ ದರ್ಶನಕ್ಕೆ ತೆರಳಿದ್ದರು. ಈ ವೇಳೆ ಯುವ ಭಕ್ತರು ತಮ್ಮೊಂದಿಗೆ ಕನ್ನಡದ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಚಿತ್ರತಾರೆ ಪವರ್ ಸ್ಟಾರ್ ಪುನಿತರಾಜ್ ಅವರ ಭಾವಚಿತ್ರವನ್ನೂ ತೆಗೆದುಕೊಂಡು ಹೋಗಿದ್ದರು. ಕೇದಾರನಾಥ ದರ್ಶನದ ಬಳಿಕ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ವಿಶೇಷ ಅಭಿಮಾನ ಮೆರೆದಿದ್ದಾರೆ.

ಬೆಳೆಯುವ ಹಂತದಲ್ಲೇ ಮರೆಯಾದ ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಕೇದಾರನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿಜಯಪುರ ಯುವಭಕ್ತರ ತಂಡ, ದೇವಸ್ಥಾನದ ಗರ್ಭಗುಡಿಯಲ್ಲಿ ಅಪ್ಪು ಭಾವಚಿತ್ರ ಇರಿಸಿ ಅರ್ಚಕರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ.

ಇದನ್ನೂ ಓದಿ:ಪಿಯುಸಿ ಫಲಿತಾಂಶ: ದ.ಕನ್ನಡ ಪ್ರಥಮ, ಉಡುಪಿ ದ್ವಿತೀಯ; ಇಲ್ಲಿದೆ ಜಿಲ್ಲಾವಾರು ಫಲಿತಾಂಶ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next