Advertisement
ಯಾವುದೇ ಶಕ್ತಿಗಿಂತ ಕಾಣದ ಒಂದು ದೈವಿಕ ಶಕ್ತಿ ನಮ್ಮನ್ನು ಕಾಪಾಡುತ್ತಿದೆ ಅಂತಹ ದೇವರ ಒಂದು ಶಕ್ತಿಯಾಗಿ ಶಿಕ್ಷಕರನ್ನು ಸೃಷ್ಟಿಯ ಮೂರು ಶಕ್ತಿಗಳಾದ ಬ್ರಹ್ಮ, ವಿಷ್ಣು ,ಮಹೇಶ್ವರರಿಗೆ ಹೋಲಿಸಲಾಗಿದೆ.
Related Articles
Advertisement
ಶಾಲೆಯಲ್ಲಿ ಮಾತ್ರ ಶಿಕ್ಷಣವನ್ನು ಒದಗಿಸುವ ಸ್ಥಳ ಎಂಬುದನ್ನು ಸುಳ್ಳಾಗಿಸಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸುವಲ್ಲಿ ನಮ್ಮೆಲ್ಲ ಶಿಕ್ಷಕ ವರ್ಗದವರು ಬದ್ಧರಾಗಿದ್ದಾರೆ.
ಈ ವಿದ್ಯಾಗಮ ಕಾರ್ಯಕ್ರಮದಿಂದಾಗಿ ಮಗುವಿನಲ್ಲಿ ಕೋವಿಡ್ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವ, ಮಗುವಿನಲ್ಲಿ ಮನೋಸ್ಥೈರ್ಯವನ್ನು ತುಂಬುವ ಒಂದು ಪುಟ್ಟ ಪ್ರಯತ್ನವನ್ನು ನಮ್ಮೆಲ್ಲ ಶಿಕ್ಷಕ ವರ್ಗದವರು ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಿಂದಾಗಿ ಅತ್ಯಮೂಲ್ಯವಾದ ಮಕ್ಕಳ ಕಲಿಕಾ ಸಮಯವೂ ವ್ಯರ್ಥವಾಗದೆ ಕಲಿಕೆಯಲ್ಲಿ ತೊಡಗಿಸುವ ದೃಷ್ಟಿಯಿಂದ ಯಶಸ್ವಿಯಾಗಿ ಕರ್ನಾಟಕದ ಸಮಸ್ತ ಶಿಕ್ಷಕ ವರ್ಗದವರು ಕಾರ್ಯನಿರತರಾಗಿದ್ದಾರೆ. ಹಾಗೂ ಯಶಸ್ವಿಗೊಳಿಸುತ್ತಿದ್ದಾರೆ. ಇಂತಹ ಉತ್ತಮವಾದ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ನಮ್ಮ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಇತಿಹಾಸವನ್ನು ಸೃಷ್ಟಿಸಿದೆ. ಮನೋಸ್ಥೈರ್ಯ, ದೃಢ ಸಂಕಲ್ಪ, ಆತ್ಮಬಲ ಹಾಗೂ ಕರ್ತವ್ಯ ನಿಷ್ಠೆಯಿಂದ ಕೆಲಸವನ್ನು ನಿರ್ವಹಿಸಿದರೆ ಎಂತಹ ಮಹಾ ಮಾರಿಯಾದರೂ ಶಿಕ್ಷಣವನ್ನು ಕುಂಠಿತಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸಮಸ್ತ ಕರ್ನಾಟಕ ರಾಜ್ಯದ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಎಂಬುದು ಮಹಾನ್ ಶಕ್ತಿ ಅದರ ರೂವಾರಿಯಾದ ಎಲ್ಲಾ ಆತ್ಮೀಯ ಹಾಗೂ ಗೌರವಾನ್ವಿತ ಶಿಕ್ಷಕ ವರ್ಗದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಯ ಪಡಿಸುತ್ತೇನೆ.
ನಳಿನ ಎನ್.ಆರ್.ಸಿ .ಆರ್.ಪಿ-ತೋಳಹುಣಸೆ
ದಾವಣಗೆರೆ ದಕ್ಷಿಣ ವಲಯ