Advertisement

ಕುಷ್ಟಗಿ: ಶಿಕ್ಷಕರ ದಿನಾಚರಣೆ

10:47 AM Sep 05, 2022 | Team Udayavani |

ಕುಷ್ಟಗಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೋಮವಾರ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರ ಮೆರವಣಿಗೆಯಲ್ಲಿ ಶಿಕ್ಷಕರು ಭರ್ಜರಿ ಸ್ಟೆಪ್‌ ಹಾಕಿ ಸಂಭ್ರಮಿಸಿದರು.

Advertisement

ಇಲ್ಲಿನ ಕಾರ್ಗಿಲ್ ಮಲ್ಲಯ್ಯ ವೃತ್ತದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಈ ಮೆರವಣಿಗೆಯಲ್ಲಿ ಹಿರೇಮನ್ನಾಪೂರ ಹೆಜ್ಜೆ ಮೇಳ, ಡೊಳ್ಳು ವಾದ್ಯ ಸಂಭ್ರಮದ ಕಳೆ ಕಟ್ಟಿತ್ತು. ಮೆರವಣಿಗೆ ಮಾರುತಿ ವೃತ್ತ, ಕನಕದಾಸ ವೃತ್ತದ ಮೂಲಕ ಕ್ರೈಸ್ತ ದಿ ಕಿಂಗ್ ಸ್ಕೂಲ್ ಸಭಾಂಗಣದವರೆಗೂ ಸಾಗಿತು. ಮಾರುತಿ ವೃತ್ತ ಮೂಲಕ ಸಾಗುವಾಗ ಡೊಳ್ಳು ವಾದನಕ್ಕೆ ಶಿಕ್ಷಕರು ಕುಣಿದು ಕುಪ್ಪಳಿಸಿದರಲ್ಲದೇ ತಾವೇ ಡೊಳ್ಳು, ತಾಳ ವಾದ್ಯ ನುಡಿಸಿ ಸಂಭ್ರಮಿಸಿದರು. ಶಿಕ್ಷಕರ ಕುಣಿತಕ್ಕೆ ಸುತ್ತುವರಿದ ಇತರೇ ಶಿಕ್ಷಕರು ಚಪ್ಪಾಳೆ, ಹರ್ಷೋದ್ಘಾರದ ಮೂಲಕ ಪ್ರೋತ್ಸಾಹಿಸಿದರು. ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಸಹ ಹೆಜ್ಜೆ ಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next