Advertisement

ತೆರಿಗೆ ವಂಚನೆ; ಆರ್‌ಟಿಓ ಅಧಿಕಾರಿಗಳಿಂದ 7 ಟಿಪ್ಪರ್‌, 1 ಜೆಸಿಬಿ ವಶ

03:56 PM Jun 03, 2022 | Team Udayavani |

ಸಾಗರ: ತೆರಿಗೆ ಪಾವತಿ ಮಾಡದೆ ಜೆಸಿಬಿ ಮತ್ತು ಟಿಪ್ಪರ್ ಓಡಾಡಿಸುತ್ತಿದ್ದ ಎಂಟು ಜನರ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿ, ದಂಡ ಸಹಿತ ತೆರಿಗೆ ವಸೂಲಿ ಮಾಡಿದ ಕುರಿತು ಶುಕ್ರವಾರ ಮಾಹಿತಿ ನೀಡಿದೆ.

Advertisement

ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರಕ್ಕೆ ತೆರಿಗೆ ವಂಚಿಸಿ ಜೆಸಿಬಿ ಮತ್ತು ಟಿಪ್ಪರ್ ಓಡಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳು, ಗುರುವಾರ ದಾಳಿ ನಡೆಸಿ 1 ಜೆಸಿಬಿ ಮತ್ತು 7 ಟಿಪ್ಪರ್‌ಗಳನ್ನು ವಶಪಡಿಸಿಕೊಂಡು, ಮಾಲೀಕರಿಂದ 4.62 ಲಕ್ಷ ರೂಪಾಯಿ ದಂಡ ಸಹಿತ ತೆರಿಗೆ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ:ಸಚಿವರ ಮನೆಯಲ್ಲಿ ಚಡ್ಡಿ ಸುಟ್ಟಿದ್ದು ಸಾಂಕೇತಿಕ ಪ್ರತಿಭಟನೆ: ಸಿದ್ದರಾಮಯ್ಯ ವ್ಯಾಖ್ಯಾನ

ಕಾರ್ಯಾಚರಣೆಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್, ಹಿರಿಯ ಮೋಟಾರ್ ವಾಹನ ನಿರೀಕ್ಷಕ ವಾಸುದೇವ್, ಹಿರಿಯ ಸಿಬ್ಬಂದಿ ಉಮೇಶ್ ಕೆ.ಬಿ., ಚಾಲಕ ಪಂಚಾಕ್ಷರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next