Advertisement

ತೆರಿಗೆ ವಂಚನೆ ಆರೋಪ: ಶ್ರೀರಾಮುಲು ಒಡೆತನದ ಕಚೇರಿಗೆ ಐಟಿ ದಾಳಿ

12:30 AM Jan 15, 2023 | Team Udayavani |

ಬಳ್ಳಾರಿ: ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಸಚಿವ ಬಿ.ಶ್ರೀರಾಮುಲು ಮತ್ತವರ ಅಳಿಯ ಮಾಜಿ ಶಾಸಕ ಟಿ.ಎಚ್‌. ಸುರೇಶ್‌ಬಾಬು ಒಡೆತನದ ಫ್ಯಾಕ್ಟರಿ ನಡೆಸುತ್ತಿದ್ದ ವ್ಯಕ್ತಿಯ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿ ಕಾರಿಗಳು ಶನಿವಾರ ದಾಳಿ ನಡೆಸಿದರು.

Advertisement

ಬೆಂಗಳೂರು ಹಾಗೂ ಚೆನ್ನೈ ಮೂಲದ ಹದಿನೈದು ಮಂದಿ ಅಧಿಕಾರಿಗಳ ತಂಡ, ಕೈಗಾರಿಕೋದ್ಯಮಿ ಕೈಲಾಸ್‌ ವ್ಯಾಸ್‌ ಪಾಲುದಾರಿಕೆಯ ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿರುವ ಕಂಪೆನಿಗಳ ಮೇಲೆ ದಾಳಿ ನಡೆಸಿದೆ. ಬಳ್ಳಾರಿಯ ವಿದ್ಯಾನಗರದ   “ರಾಗಾಸ್‌ ಪೋರ್ಟ್‌ ಅಪಾರ್ಟ್‌ ಮೆಂಟ್‌ ’ನ  ಎರಡು ಫ್ಲ್ಯಾಟ್‌ಗಳಲ್ಲೂ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.

ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್‌ ಬಾಬು, ಲಾಡ್‌ ಕುಟುಂಬದ ಪ್ಲಾಂಟ್‌ಗಳನ್ನು ಪಾಲುದಾರ ಕೈಲಾಸ್‌ ವ್ಯಾಸ್‌ ಅವರು ಬಾಡಿಗೆ ಹಾಗೂ ಲೀಜ್‌ ಮೇಲೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next