Advertisement

ತಾರಿಹಾಳ ಅಗ್ನಿ ಅವಘಡ: ಗಂಭೀರ ಗಾಯಗೊಂಡಿದ್ದ ಮೂವರ ಸಾವು

12:07 PM Jul 24, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಶನಿವಾರ ನಡೆದ ಅಗ್ನಿ ಅವಘಡದಲ್ಲಿ ಗಂಭೀರ ಸುಟ್ಟು ಗಾಯಗೊಂಡಿದ್ದ ಎಂಟು ಜನರಲ್ಲಿ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Advertisement

ಅಗ್ನಿ ಅವಘಡದಲ್ಲಿ ಕಲಘಟಗಿ ತಾಲೂಕ ಲಿಂಗನಕೊಪ್ಪ ಗ್ರಾಮದ ಮಾಲೇಶ ಬಸಪ್ಪ ಹದನ್ನನವರ (27 ವ), ಹುಬ್ಬಳ್ಳಿ ತಾಲೂಕ ತಾರಿಹಾಳದ ವಿಜಯಲಕ್ಷ್ಮಿ ವೀರಭದ್ರ ಯಚ್ಚಲಗಾರ (34 ವ), ಗೌರಮ್ಮ ವೀರಭದ್ರಯ್ಯ ಹಿರೇಮಠ (45 ವ) ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಪೊಲೀಸ್‌ ಆಯಕ್ತರ ಕಚೇರಿ ಬಳಿ ಲಕ್ಷಾಂತರ ರೂ. ಕಳ್ಳತನ: ಆರೋಪಿಗಳು ಪರಾರಿ

ತಾರಿಹಾಳದ ಚನ್ನಮ್ಮ ಎಂ. ಅರಿವಾಳ, ಪ್ರೇಮಾ ಎಂ. ಅರಿವಾಳ, ನನ್ನಿಮಾ ಎಂ. ಪಡದಾರ, ಮಲ್ಲಿಕರೆಹಾನ ಬಿ. ಕೊಪ್ಪದ, ನಿರ್ಮಲಾ ಎಸ್. ಹುಚ್ಚನವರ ತೀವ್ರ ಸುಟ್ಟು ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next