Advertisement

ಕಟಪಾಡಿ: ಬೈಕ್‌ಗೆ ಟ್ಯಾಂಕರ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

08:57 AM Feb 22, 2018 | |

ಕಾಪು: ರಾ.ಹೆ. 66ರ ಕಟಪಾಡಿ- ತೇಕಲತೋಟ ಜಂಕ್ಷನ್‌ ಬಳಿ ಬುಧವಾರ ರಾತ್ರಿ ಬೈಕ್‌ಗೆ ಟ್ಯಾಂಕರ್‌ ಢಿಕ್ಕಿ ಹೊಡೆದು  ಸವಾರ  ಕಟಪಾಡಿ ಪೆಟ್ರೋಲ್‌ ಪಂಪ್‌ ಬಳಿಯ ನಿವಾಸಿ ತೋಮ ಪೂಜಾರಿ ಅವರ ಪುತ್ರ ಗುರುಪ್ರಸಾದ್‌ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿದೇಶ ದಲ್ಲಿ ಉದ್ಯೋಗದಲ್ಲಿದ್ದ ಅವರು ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಕೆಲವೇ ದಿನಗಳಲ್ಲಿ ವಿದೇಶಕ್ಕೆ ತೆರಳುವವರಿದ್ದರು.    

Advertisement

 ಮನೆಯಿಂದ ಕೇವಲ 500 ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ.  ಬೈಕ್‌ ಉಡುಪಿಯಿಂದ ಕಟಪಾಡಿಗೆ ಬರುತ್ತಿತ್ತು. ಟ್ಯಾಂಕರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಟಪಾಡಿ ಹೊರಠಾಣೆಯ ಎಎಸ್‌ಐ ಹರೀಶ್‌ ಮತ್ತು ಸಿಬಂದಿ ಸಂಚಾರವನ್ನು ನಿಯಂತ್ರಿಸಿದರು.  

ಬುಲೆಟ್‌ಗೆ ಕಾರು ಢಿಕ್ಕಿ; ಸವಾರ ಗಂಭೀರ

ಕಾಪು ಪೊಲೀಸ್‌ ಠಾಣೆಯ  ಮುಂಭಾಗದಲ್ಲಿ  ಬುಲೆಟ್‌ಗೆ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ಉಡುಪಿ ನಿವಾಸಿ ಇಮ್ತಿಯಾಜ್‌ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಕಾಪುವಿನಿಂದ ಉಡುಪಿಗೆ ತೆರಳುತ್ತಿದ್ದ ಬುಲೆಟ್‌ಗೆ ಕಾರು ಢಿಕ್ಕಿ ಹೊಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next