Advertisement

ಪೆರಿಯಾರ್‌ ಜನ್ಮದಿನ ಇನ್ನು “ಸಾಮಾಜಿಕ ನ್ಯಾಯದಿನ’

09:12 PM Sep 06, 2021 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ರೂಪಿಸಿದ ಮುಖಂಡ ಇ.ವಿ.ರಾಮಸ್ವಾಮಿ ಪೆರಿಯಾರ್‌ ಜನ್ಮದಿನ, ಸೆ.17 ಅನ್ನು ಪ್ರತಿ ವರ್ಷ “ಸಾಮಾಜಿಕ ನ್ಯಾಯದಿನ’ ಎಂದು ಆಚರಿಸಲು ತೀರ್ಮಾನಿಸಲಾಗಿದೆ.

Advertisement

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಎಂ.ಕೆ.ಸ್ಟಾಲಿನ್‌ ಈ ಮಾಹಿತಿ ನೀಡಿದ್ದಾರೆ. ಪೆರಿಯಾರ್‌ ಸಾಮಾಜಿಕ ನ್ಯಾಯ, ಆತ್ಮಗೌರವ, ಸಮಾನತೆ ಬಗ್ಗೆ ಹೊಂದಿದ್ದ ನಿಲುವುಗಳು ರಾಜ್ಯ ಸದ್ಯ ಹೊಂದಿರುವ ಅಭಿವೃದ್ಧಿಗೆ ಕಾರಣವಾಗಿದೆ.

ಹೀಗಾಗಿ, ಪ್ರಸಕ್ತ ವರ್ಷದಿಂದ ಅನ್ವಯವಾಗುವಂತೆ ಅವರ ಜನ್ಮದಿನವನ್ನು ಪ್ರತಿ ವರ್ಷ “ಸಾಮಾಜಿಕ ನ್ಯಾಯದಿನ’ ಎಂದು ಆಚರಿಸಲಾಗುವುದು. ಆ ದಿನ ಸಚಿವಾಲಯ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಹೋದರತ್ವ, ಸಮಾನತೆ, ಆತ್ಮಗೌರವದ ಪ್ರತಿಜ್ಞೆಯನ್ನು ಸ್ವೀಕರಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next