Advertisement

ಉಚಿತ ವೇಷ್ಟಿ, ಸೀರೆಗಳಿಗೆ ಮುಗಿಬಿದ್ದ ಜನ; ನಾಲ್ವರು ಮಹಿಳೆಯರ ಮೃತ್ಯು

05:44 PM Feb 04, 2023 | Team Udayavani |

ಚೆನ್ನೈ : ತಮಿಳುನಾಡಿನ ತಿರುಪ್ಪತ್ತೂರಿನ ವಾಣಿಯಂಬಾಡಿಯಲ್ಲಿ ಶನಿವಾರ ತೈಪೂಸಂ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

Advertisement

ವ್ಯಕ್ತಿಯೊಬ್ಬರು ವಿತರಿಸುತ್ತಿದ್ದ ಉಚಿತ ವೇಷ್ಟಿಗಳು ಮತ್ತು ಸೀರೆಗಳ ಸಂಗ್ರಹಕ್ಕಾಗಿ ಟೋಕನ್‌ಗಳನ್ನು ಸ್ವೀಕರಿಸಲು ಏಕಕಾಲದಲ್ಲಿ ಸಾವಿರಾರು ಜನರು ಜಮಾಯಿಸಿದಾಗ ಅವಘಡ ನಡೆದಿದೆ.

ವ್ಯಕ್ತಿಯೊಬ್ಬರು ವಸ್ತ್ರಗಳನ್ನು ವಿತರಿಸುತ್ತಿದ್ದರು ಈ ವೇಳೆ ಏಕಕಾಲದಲ್ಲಿ ಜನರು ಮುಗಿಬಿದ್ದ ಕಾರಣ ಅವಘಡ ಸಂಭವಿಸಿದೆ ಎಂದು ತಿರುಪತ್ತೂರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next