Advertisement

ತಮಿಳ್ನಾಡು ಆರೋಗ್ಯ ಸಚಿವರ ಮೇಲೆಯೇ “ಗುಟ್ಕಾ’ದಾಳಿ

06:00 AM Sep 06, 2018 | |

ಹೊಸದಿಲ್ಲಿ/ಚೆನ್ನೈ: ಗುಟ್ಕಾ ಕಂಪೆನಿಗಳ ತೆರಿಗೆ ವಂಚನೆ ಪ್ರಕರಣ ಸಂಬಂಧ ಕರ್ನಾಟಕದ ಐದು ಸ್ಥಳಗಳು ಮತ್ತು ತಮಿಳುನಾಡಿನ 35 ಸ್ಥಳಗಳಲ್ಲಿ ಸಿಬಿಐ ಬುಧವಾರ ದಾಳಿ ನಡೆಸಿದೆ. 2017ರ ಜುಲೈಯಲ್ಲಿ ತಮಿಳುನಾಡಿ ನಲ್ಲಿ ಬಹಿರಂಗವಾದ 250 ಕೋಟಿ ರೂ. ಗುಟ್ಕಾ ಕಂಪೆನಿಗಳ ತೆರಿಗೆ ವಂಚನೆ ಪ್ರಕರಣ ಸಂಬಂಧ ‌ ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್‌, ಪೊಲೀಸ್‌ ಮಹಾ ನಿರ್ದೇಶಕ ಟಿ.ಕೆ. ರಾಜೇಂದ್ರನ್‌, ಚೆನ್ನೈಯ ನಿವೃತ್ತ ಪೊಲೀಸ್‌ ಆಯುಕ್ತ ಎಸ್‌. ಜಾರ್ಜ್‌, ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ತಮಿಳು ನಾಡಿನಲ್ಲಿ ಡಿಜಿಪಿ ನಿವಾಸದ ಮೇಲೆಯೂ ದಾಳಿ ನಡೆದಿದೆ. ಜತೆಗೆ ಅದೇ ರಾಜ್ಯದ ಸಚಿವರೊಬ್ಬರು ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳ ತನಿಖೆಗೆ ಗುರಿಯಾಗಿದ್ದಾರೆ.

Advertisement

2017ರ ಜುಲೈಯಲ್ಲಿ ಬೆಳಕಿಗೆ ಬಂದ ಗುಟ್ಕಾ ಕಂಪೆನಿಗಳ 250 ಕೋಟಿ ರೂ. ಮೌಲ್ಯದ ತೆರಿಗೆ ವಂಚನೆ ಪ್ರಕರಣ ಸಂಬಂಧ ದಾಳಿ ನಡೆಸಿ ಹಲವು ದಾಖಲೆಗಳು, ಡೈರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳಲ್ಲಿ ತಮಿಳುನಾಡು ಆರೋಗ್ಯ ಸಚಿವರಿಗೆ 40 ಕೋಟಿ ರೂ. ನೀಡಲಾಗಿತ್ತು ಎಂಬ ಅಂಶ ಪ್ರಸ್ತಾವವಾಗಿತ್ತು. ಜತೆಗೆ ಡಿಜಿಪಿ ಹೆಸರೂ ಕೇಳಿಬಂದಿತ್ತು. ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕರು ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next