Advertisement

ಪ್ರತಿಭೆಯಲ್ಲಿ ಪ್ರತಿಭಾನ್ವಿತೆ ಅನ್ವಿತಾ

04:42 PM Jun 27, 2021 | Team Udayavani |

ಸಣ್ಣ ಪ್ರಯತ್ನದಿಂದಲೇ ಸಾಧನೆಯ ಮೆಟ್ಟಿಲನ್ನು ಹತ್ತಲು ಪ್ರತಿಯೊಂದು ಪ್ರತಿಭೆಗಳಿಗೆ ಮೊದಲ ಹೆಜ್ಜೆ ಆಗಿರುತ್ತದೆ. ಕಲೆ ಎಂಬುದು ಹುಟ್ಟಿನಿಂದಲೇ ಬರುವುದಲ್ಲ. ನಮ್ಮ ಆಸಕ್ತಿಯಿಂದ ಹುಟ್ಟಿಕೊಳ್ಳುವುದು. ಆಸಕ್ತಿ ಎನ್ನುವುದು ಸಣ್ಣ ವಯಸ್ಸಿನಲ್ಲೇ ಬಂದರೆ ಸಾಧನೆಯ ಉತ್ತುಂಗಕ್ಕೇರಲು ಬಹಳ ಸುಲಭ.

Advertisement

ಹೆಣ್ಣುಮಕ್ಕಳು ಎಂದಾಗ ಕೆಲವರ ಮನಸ್ಸಲ್ಲಿ ಆಕೆ ಏನು ಸಾಧನೆ ಮಾಡುತ್ತಾಳೆ? ಎನ್ನುವುದೊಂದು ಭಾವನೆ ಇದ್ದೆ ಇರುತ್ತದೆ. ಆದರೆ ನಮ್ಮ ಸಮಾಜದಲ್ಲಿ ಇಂದು ಹೆಣ್ಣು ಮಕ್ಕಳು ಎಲ್ಲದರಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ. ಸಮಾಜದಲ್ಲಿ ತಾನು ಕೂಡ ಗುರುತಿಸಿಕೊಳ್ಳಬೇಕು ಎಂದು ಹಲವಾರು ಕಲೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಈ ಹುಡುಗಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುತ್ತಾರೆ.

ಈಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರಿನಲ್ಲಿ ಮತ್ತು ಪ್ರೌಢ ಶಾಲೆಯನ್ನು ನವೋದಯ ಶಾಲೆ ಬೆಟ್ಟಂಪ್ಪಾಡಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿ ಇಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಬಿಎಸ್‌ಡಬ್ಲ್ಯು ಕಲಿಯುತ್ತಿದ್ದು, ಇವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ನಾಕಪ್ಪಾಡಿಯ ಮಂಜಪ್ಪ ಪೂಜಾರಿ ಹಾಗೂ ಪವಿತ್ರಾ ದಂಪತಿ ಪುತ್ರಿ ಅನ್ವಿತಾ.

ಸಣ್ಣವಯಸ್ಸಿನಲ್ಲೇ ಬಣ್ಣದ ಪೆನ್ಸಿಲ್‌ಗ‌ಳನ್ನು ಹಿಡಿಯಲು ಶುರು ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಆಸಕ್ತಿ ತೋರಿದ ಕಾರಣ ಇವರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಂತೆ ಆಗಿದೆ. ಚಿತ್ರಕಲೆ ಅಲ್ಲದೆ ನೃತ್ಯ ಮಾಡಲು ಸೈ ಎನ್ನುವ ಇವರು ರಂಗೋಲಿ, ಲೇಖನ, ವ್ಯಕ್ತಿ ಚಿತ್ರ, ಮೆಹಂದಿ ಹೀಗೆ ಮೊದಲಾದ ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.

ಈಕೆ 2016-17ನೇ ಸಾಲಿನಲ್ಲಿ ಕರ್ನಾಟಕ ಸೆಕೆಂಡರಿ ಪರೀಕ್ಷಾ ಮಂಡಳಿಯವರು ನಡೆಸಿದ ಚಿತ್ರಕಲೆಯ ಲೋವರ್‌ಗ್ರೇಡ್‌ ಪರೀಕ್ಷೆ ಬರೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು, ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು. ಹಲವಾರು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.

Advertisement

ಈಕೆಗೆ ಹೆಚ್ಚು ಆಸಕ್ತಿ ಮಂಡಲ ಕಲೆಯಲ್ಲಿ, ಇನ್ನು ಹೆಚ್ಚು ವಿಭಿನ್ನವಾಗಿ ರಚಿಸಬೇಕೆಂಬುದು ಇವರ‌ ಆಶಯ. ಹಾಗೆಯೇ ಹೇರ್‌ಸ್ಟೈಲ್‌, ರಂಗು ರಂಗಿನ ರಂಗೋಲಿಯಲ್ಲೂ ಆಸಕ್ತಿ ಹೊಂದಿರುವ ಈಕೆ ಅದ್ಭುತವಾದ ಮಂಡಲ ಚಿತ್ರಗಳನ್ನು ರಚಿಸುತ್ತಾರೆ.

ಈಕೆಗೆ ಪೆನ್‌, ಪೆನ್ಸಿಲ್‌ ಶೀಟ್‌ ಪೇಪರ್‌ಕಂಡರೆ ಸಾಕು ಏನಾದರು ಡ್ರಾಯಿಂಗ್‌ ಬಿಡಿಸಬೇಕೇನ್ನುವ ಹಂಬಲ. ಈಕೆ ಮೂರನೇ ತರಗತಿಯಲ್ಲಿರುವಾಗ ಒಂದು ಗಣಪತಿಯ ಡ್ರಾಯಿಂಗ್‌ ಬಿಡಿಸಿದ್ದನ್ನು ಈಕೆಯ ಶಾಲೆಯ ಸರ್‌ನೊàಡಿ ಪೇಪರ್‌ನಲ್ಲಿ ಪ್ರಕಟ ಮಾಡಿದ್ದರು, ಅಲ್ಲಿಂದ ಈಕೆಗೆ ಚಿತ್ರ ಕಲೆಯಲ್ಲಿ ಇನ್ನು ಆಸಕ್ತಿ ಹೆಚ್ಚುತ್ತಲೇ ಹೋಯಿತು.

ಪ್ರಸ್ತುತ ಇವರು ಸಿ ಆರ್‌ಕ್ರಿಯೇಷನ್‌ ಎಂಬ ಯುಟ್ಯೂಬ್‌ ಚಾನೆಲ್‌ ಅಲ್ಲಿ ಸದಸ್ಯರಾಗಿದ್ದು, ಅದೇ ತಂಡದಿಂದ ಮುಂದೆ ಬರುವಂತಹ ಕಿರು ಚಿತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಹೊಂದಿದ್ದಾರೆ.

ಕಲೆಗೆ ಆಸಕ್ತಿ ಇರುವುದರಿಂದ ಸಣ್ಣ ವಯಸ್ಸಿನಲ್ಲಿ ತಾನೇ ಚಿತ್ರಕಲೆಯನ್ನು ಬಿಡಿಸುತ್ತ ಬಂದವರು. ನವೋದಯ ಪ್ರೌಢ ಶಾಲೆಯಲ್ಲಿ ಐ. ಗೋಪಾಲಕೃಷ್ಣರಾವ್‌ ಅವರಿಂದ ಚಿತ್ರಕಲೆ ಅಭ್ಯಾಸ ಮಾಡಿದ್ದರು. ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಮಂಡಲ ಚಿತ್ರ ಕಲೆಗೂ ಹೆಚ್ಚು ಒಲವು ಬಂತು ಎಂದು ಅನ್ವಿತಾ ಹೇಳುತ್ತಾರೆ. ಬಹಳ ಸುಂದರವಾಗಿ, ಚಿತ್ರ ರಚಿಸುತ್ತಾರೆ. ಆಸಕ್ತಿ ಇದ್ದರೆ ಯಾವ ಕೆಲಸಗಳನ್ನು ಮಾಡಬಹುದು. ನಮ್ಮಲ್ಲಿ ನಂಬಿಕೆ ಮತ್ತು ಆಸಕ್ತಿ ಇರಬೇಕು. ಈಕೆಯ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುವ.

 

ರಸಿಕಾ ಮುರುಳ್ಯ

ಪತ್ರಿಕೋದ್ಯಮ ವಿಭಾಗ,

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next