Advertisement

ಪ್ರೊ ಕಬಡ್ಡಿ: ಬೆಂಗಾಲ್‌ಗೆ ಶರಣಾದ ತಲೈವಾಸ್‌

09:55 AM Aug 30, 2019 | sudhir |

ಹೊಸದಿಲ್ಲಿ: ಕೆ. ಪ್ರಪಂಜನ್‌ (10 ಅಂಕ), ಮಣಿಂದರ್‌ ಸಿಂಗ್‌ (9 ಅಂಕ) ಜೋಡಿಯ ಪ್ರಚಂಡ ರೈಡಿಂಗ್‌ ಹಾಗೂ ರಿಂಕು ನರ್ವಾಲ್‌ (5 ಅಂಕ) ಅವರ ಅಬ್ಬರದ ಟ್ಯಾಕ್ಲಿಂಗ್‌ ನೆರವಿನಿಂದ ಪ್ರೊ ಕಬಡ್ಡಿ 7ನೇ ಆವೃತ್ತಿ ಹೊಸದಿಲ್ಲಿ ಚರಣದ ಗುರುವಾರದ ಏಕೈಕ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಬೆಂಗಾಲ್‌ ವಾರಿಯರ್ 35-26 ಅಂಕಗಳ ಗೆಲುವು ಸಾಧಿಸಿತು.

Advertisement

ಇಲ್ಲಿನ ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್‌ ಆಟಗಾರರು ಬಿರುಸಿನ ಆಟ ಪ್ರದರ್ಶಿಸಿದರು. ಮತ್ತೂಂದು ಕಡೆಗೆ ತಮಿಳ್‌ ತಲೈವಾಸ್‌ ಪ್ರಬಲ ಹೋರಾಟ ಪ್ರದರ್ಶಿಸಿತಾದರೂ ಕೊನೆಯಲ್ಲಿ ಎಡವಟ್ಟು ಮಾಡಿಕೊಂಡು ಮುಗ್ಗರಿಸಿತು.

ತಲೈವಾಸ್‌ ಪರ ಅಜಯ್‌ ಠಾಕೂರ್‌ (11 ಅಂಕ) ಏಕಾಂಗಿ ಹೋರಾಟ ನಡೆಸಿದರು. ಶಬ್ಬೀರ್‌ ಬಾಪು (4 ಅಂಕ) ಸ್ವಲ್ಪಮಟ್ಟಿಗೆ ಮಿಂಚಿದರೆ, ಖ್ಯಾತ ಆಟಗಾರರಾದ ಮಂಜಿತ್‌ ಚಿಲ್ಲಾರ್‌ (3 ಅಂಕ) ಹಾಗೂ ರಾಹುಲ್‌ ಚೌಧರಿ (1 ಅಂಕ) ಭಾರೀ ವೈಫ‌ಲ್ಯ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next