Advertisement

Karnataka: ಸೆರೆ ಅಂಗಡಿ ತೆಗೆದು ಹೆಣ್ಮಕ್ಕಳಿಂದ ಹೊಡೆಸಿಕೊಳ್ಳಲಿ: ಸಿದ್ದೇಶ್ವರ್‌

10:21 PM Oct 06, 2023 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಪಂಚಾಯಿತಿಗೊಂದು ಸೆರೆ ಅಂಗಡಿ ತೆಗೆಯಲಿ. ಗೃಹಲಕ್ಷ್ಮಿ ಅಂತ ದುಡ್ಡು ಕೊಟ್ಟರಲ್ಲ. ಆ ಹೆಣ್ಮಕ್ಕಳಿಂದಲೇ ಹೊಡೆಸಿಕೊಳ್ಳಲಿ ಎಂದು ಸಂಸದ ಡಾ|ಜಿ.ಎಂ.ಸಿದ್ದೇಶ್ವರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ರಾಪಂಗೊಂದು ಮದ್ಯದಂಗಡಿ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಮದ್ಯದ ಅಂಗಡಿ ತೆರೆದರೆ ಗೃಹಲಕ್ಷ್ಮಿ ಅಂತಾ ಕೊಟ್ಟಿದ್ದಾರಲ್ಲ ಅವರೇ ಏಟು ಕೊಡ್ತಾರೆ. ಹೊಡೆಸಿಕೊಳ್ಳಲಿ ಎಂದರು.

Advertisement

ಶಿವಮೊಗ್ಗದಲ್ಲಿ ನಡೆದಿರುವುದು ಮುಸ್ಲಿಂ ಮತಾಂಧರ ಗಲಾಟೆ. ಆದರೆ, ಕಾಂಗ್ರೆಸ್‌ನ ಇಬ್ಬರು ಹಿರಿಯ ಸಚಿವರು ಬಿಜೆಪಿ ಮೇಲೆ ಆರೋಪ ಮಾಡಿರುವುದು ಖೇದಕರ ಸಂಗತಿ. ಸರ್ಕಾರ ಕೂಡಲೇ ಈ ಘಟನೆಯನ್ನು ನ್ಯಾಯಾಂಗ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ. ಆದರೆ, ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿರುವುದು ನನಗೆ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next