Advertisement

ಸೌಲಭ್ಯ ಪಡೆದು ಸದೃಢರಾಗಿ

12:40 PM Aug 13, 2018 | Team Udayavani |

ಕೆಂಗೇರಿ: ಸರ್ಕಾರ ವಿವಿಧ ಯೋಜನೆಯಡಿ ರೈತರಿಗೆ ಹಲವಾರು ಸವಲತ್ತು ಕಲ್ಪಿಸಿದ್ದು, ಇವುಗಳ ಸದುಪಯೋಗಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಸಲಹೆ ನೀಡಿದರು.

Advertisement

ರಾಮೋಹಳ್ಳಿಯಲ್ಲಿ ಕೃಷಿ ಇಲಾಖೆ ಅಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ-ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ, ಕೃಷಿ ವಸ್ತು ಪ್ರದರ್ಶನ ಹಾಗೂ ರೈತವಿಜ್ಞಾನಿ ಜತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಹಾದಿ ಹಿಡಿಯಬಾರದು. ಸರ್ಕಾರ ರೈತರ ಪರವಾಗಿದ್ದು, ಸಾಲಮನ್ನಾ ಮತ್ತಿತರ ಯೋಜನೆಗಳ ಮೂಲಕ ನಿಮ್ಮ ಹಿತಕಾಯಲು ಬದ್ಧವಾಗಿದೆ ಎಂದರು. 

ರಾಮೋಹಳ್ಳಿ ಗ್ರಾಪಂ ಅಧ್ಯಕ್ಷೆ ರೂಪಾ ಮಾತನಾಡಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ, ಕೆಂಗೇರಿ ಹೋಬಳಿ ಕೃಷಿ ಅಧಿಕಾರಿ ಪದ್ಮಾವತಿ, ಕೃಷಿಕ ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ ಗೌಡ, ಟಿ.ನಾರಾಯಣಪ್ಪ, ರಾಮೋಹಳ್ಳಿ ಡೇರಿ ಅಧ್ಯಕ್ಷ ವಿ.ವೇಣುಗೋಪಾಲ್‌, ದೇವರಾಜು, ನಾಗರಾಜು, ಜಯಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next