Advertisement

ಒತ್ತಡಕ್ಕೆ ಮಣಿಯದೇ ಕ್ರಮ ಕೈಗೊಳ್ಳಿ

01:17 PM Apr 25, 2021 | Team Udayavani |

ಗದಗ: ಜಿಲ್ಲಾದ್ಯಂತ ಕೋವಿಡ್‌ ಮಾರ್ಗಸೂಚಿಗಳನ್ನುಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಯಾವುದೇರೀತಿಯ ರಾಜಕೀಯ ಒತ್ತಡಕ್ಕೆ ಮಣಿಯದೇಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾ ಉಸ್ತುವಾರಿಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಕೋವಿಡ್‌ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಸಚಿವರು, ಕೋವಿಡ್‌ ಕಾರ್ಯನಿರ್ವಹಣೆಯಲ್ಲಿನಿರ್ಲಕ್ಷÂ

ಸಹಿಸುವುದಿಲ್ಲ. ಕೋವಿಡ್‌ ನಿಯಂತ್ರಣಕ್ಕೆಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಕ್ರಮಗಳನ್ನುಕೈಗೊಳ್ಳಲಾಗಿದೆ. ವಿವಿಧ ಇಲಾಖೆಗಳಿಗೆ ವಹಿಸಿದಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕಕೋವಿಡ್‌ ನಿಯಂತ್ರಿಸಬೇಕೆಂದರು.ನಿಯಮ ಉಲ್ಲಂಘಿಸಿದಲ್ಲಿ ಸಾರ್ವಜನಿಕರುಹಾಗೂ ಸಂಘಸಂಸ್ಥೆಗಳ ಮೇಲೆ ದಂಡ ವಿಧಿ ಸುವಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು.

ವಾರಾಂತ್ಯದ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಸರಿಯಾಗಿಅನುಷ್ಠಾನಗೊಳ್ಳಬೇಕೆಂದು ಹೇಳಿದರು.ಜಿಲ್ಲೆಯಲ್ಲಿರುವ ಆಕ್ಸಿಜನ್‌ ಪ್ರಮಾಣ, ಚಿಕಿತ್ಸೆಗೆಅಗತ್ಯವಿರುವ ಔಷ ಧಗಳು ಹಾಗೂ ಮಾನವಸಂಪನ್ಮೂಲ ಹಾಗೂ ಜಿಲ್ಲೆಯ ಕೋವಿಡ್‌ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಇರುವಸಾಮರ್ಥ್ಯ ಹಾಗೂ ಬೆಡ್‌ಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಯಾವುದೇಕಾರಣಕ್ಕೂ ಯಾವೊಬ್ಬ ಸೋಂಕಿತರೂ ಚಿಕಿತ್ಸೆಯಿಂದವಂಚಿತರಾಗಬಾರದು.

ಈ ಬಗ್ಗೆ ಆರೋಗ್ಯ ಇಲಾಖೆಹಾಗೂ ಜಿಮ್ಸ್‌ ಅ ಧಿಕಾರಿಗಳು ನಿಗಾ ವಹಿಸಬೇಕೆಂದುನಿರ್ದೇಶನ ನೀಡಿದರು.ಸೋಂಕಿತರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಕಳುಹಿಸದೇ, ತಾಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆನೀಡಬೇಕು. ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಅಗತ್ಯವಿದ್ದಲ್ಲಿ ಮಾತ್ರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕು.ಈ ಬಗ್ಗೆ ಜಿಲ್ಲಾ ಆರೋಗ್ಯಾ ಧಿಕಾರಿಗಳು ಕ್ರಮವಹಿಸಬೇಕೆಂದು ಆದೇಶಿಸಿದರು.ಚಿಕಿತ್ಸೆ ಪಡೆದು ಗುಣಮುಖರಾದವರನ್ನುಅನಗತ್ಯವಾಗಿ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೇ ತಕ್ಷಣಬಿಡುಗಡೆ ಮಾಡಬೇಕು.

Advertisement

ಸೋಂಕಿತರಿಗೆ ಸೂಕ್ತಚಿಕಿತ್ಸೆ ಒದಗಿಸುವುದರೊಂದಿಗೆ ಮೆನ್ಯು ಪ್ರಕಾರಬಿಸಿ ಆಹಾರ ಒದಗಿಸಬೇಕು. ಆಸ್ಪತ್ರೆಯಲ್ಲಿ ಶುಚಿತ್ವಕ್ಕೆಒತ್ತು ನೀಡಬೇಕೆಂದು ಆರೋಗ್ಯಾ ಧಿಕಾರಿಗಳಿಗೆಸೂಚಿಸಿದರು.ಸಹಾಯಕ ಔಷಧ ನಿಯಂತ್ರಕ ಸಂಗಣ್ಣ ಶಿಳ್ಳೆಮಾತನಾಡಿ, ಆಕ್ಸಿಜನ್‌ ಹಾಗೂ ರೆಮ್‌ಡಿಸಿವಿರ್‌ಚುಚ್ಚುಮದ್ದು ಜಿಲ್ಲೆಯಲ್ಲಿ ಸದ್ಯಕ್ಕೆ ಅಗತ್ಯಕ್ಕೆತಕ್ಕಷ್ಟು ಸಂಗ್ರಹವಿದೆ.

ಮುಂದಿನ ದಿನಗಳಲ್ಲಿಕೊರತೆಯಾಗದಂತೆ ಹೆಚ್ಚುವರಿ ಬೇಡಿಕೆ ಸಲ್ಲಿಸಲಾಗಿದೆಎಂದು ಮಾಹಿತಿ ನೀಡಿದರು.ಜಿಲ್ಲಾ ಆರೋಗ್ಯಾ ಧಿಕಾರಿ ಡಾ|ಸತೀಶ ಬಸರಿಗಿಡದಮಾತನಾಡಿ, ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿಮುಂಡರಗಿ, ನರಗುಂದ, ರೋಣ ತಾಲೂಕುಆಸ್ಪತ್ರೆಗಳಲ್ಲಿ ತಲಾ 50 ಹಾಗೂ ಗಜೇಂದ್ರಗಡ,ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕುಗಳಲ್ಲಿ ತಲಾ 30ಬೆಡ್‌ಗಳ ಸಾಮರ್ಥ್ಯವಿದೆ.

ಜಿಲ್ಲೆಯ ವಿವಿಧತಾಲೂಕುಗಳಲ್ಲಿ ಒಟ್ಟು 240 ಬೆಡ್‌ಗಳು ಲಭ್ಯವಿದೆಎಂದರು.ಜಿಮ್ಸ್‌ ನಿರ್ದೇಶಕ ಡಾ|ಪಿ.ಎಸ್‌. ಭೂಸರೆಡ್ಡಿಮಾತನಾಡಿ, ಜಿಮ್ಸ್‌ ಹಾಗೂ ಜಿಲ್ಲಾಸ್ಪತ್ರೆಯಲ್ಲಿ 350ಬೆಡ್‌ಗಳ ಸಾಮರ್ಥ್ಯವಿದೆ. ಸದ್ಯ 90 ಜನ ಸೋಂಕಿತರುಹಾಗೂ ರೋಗ ಲಕ್ಷಣಗಳಿರುವವರು ಚಿಕಿತ್ಸೆಪಡೆಯುತ್ತಿದ್ದಾರೆ.

ಅಗತ್ಯವಿದ್ದಲ್ಲಿ ಜಿಮ್ಸ್‌ ಪಕ್ಕದಲ್ಲೇಇರುವ ಹಿಂದುಳಿದ ವರ್ಗಗಳ ವಸತಿ ನಿಲಯವನ್ನುಕೋವಿಡ್‌ ಕೇರ್‌ ಸೆಂಟರ್‌ ಆಗಿ ಮಾರ್ಪಡಿಸಿ,ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಗುವುದೆಂದುಮಾಹಿತಿ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಸತೀಶಕುಮಾರ್‌ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ಎನ್‌., ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ,ಡಿಎಸ್‌ಒ ಡಾ|ಜಗದೀಶ ನುಚ್ಚಿನ, ಆರ್‌ಸಿಎಚ್‌ಅ ಧಿಕಾರಿ ಡಾ|ಬಿ.ಎಂ.ಗೊಜನೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಲ್ಲೇದ, ತಾಲೂಕು ವೈದ್ಯಾಧಿ ಕಾರಿಡಾ| ಎಸ್‌.ಎಸ್‌.ನೀಲಗುಂದ, ನಗರಸಭೆಪೌರಾಯುಕ್ತ ರಮೇಶ ಜಾಧವ ಮತ್ತಿತರಅ ಧಿಕಾರಿಗಳು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next