Advertisement

ತೈವಾನ್‌ ಬಗ್ಗೆ ಏಕಪಕ್ಷೀಯ ನಿರ್ಧಾರ ಬೇಡ: ಅರಿಂದಂ ಬಗಚಿ

09:51 PM Aug 12, 2022 | Team Udayavani |

ನವದೆಹಲಿ: ಚೀನ ಮತ್ತು ತೈವಾನ್‌ ನಡುವಿನ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಶುಕ್ರವಾರ ಆತಂಕ ವ್ಯಕ್ತಪಡಿಸಿದೆ.

Advertisement

ತೈವಾನ್‌ ದೇಶದ ವ್ಯಾಪ್ತಿಯಲ್ಲಿ ಇರುವ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಹೇಳಿದ್ದಾರೆ.

ಗಮನಾರ್ಹ ಅಂಶವೆಂದರೆ, ಇದೇ ಮೊದಲ ಬಾರಿಗೆ ತೈವಾನ್‌ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.

“ಬೇರೆ ಬೇರೆ ರಾಷ್ಟ್ರಗಳಂತೆ ನಾವೂ ತೈವಾನ್‌ನ ಮೇಲಾಗಿರುವ ಬೆಳವಣಿಗೆ ಬಗ್ಗೆ ಕಳವಳ ಹೊಂದಿದ್ದೇವೆ. ಅಲ್ಲಿನ ಸ್ಥಿತಿ ಬದಲಾಯಿಸಲು ಏಕಪಕ್ಷೀಯ ಕ್ರಮಗಳನ್ನು ತಪ್ಪಿಸುವುದಕ್ಕೆ, ಶಾಂತಿ ಮತ್ತು ಸುಸ್ಥಿರತೆ ಕಾಪಾಡುವುದಕ್ಕೆ ನಾವು ಮನವಿ ಮಾಡುತ್ತೇವೆ.

ನಮ್ಮ ಭಾರತದ ನೀತಿಗಳು ಸುಪ್ರಸಿದ್ಧ ಹಾಗೂ ಸ್ಥಿರವಾದಂತವು. ಅವುಗಳನ್ನು ನಾವು ಮತ್ತೆ ತಿಳಿಸುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next