Advertisement

ನಡಹಳ್ಳಿ ಮನೆ ಮೇಲೆ ತಹಶೀಲ್ದಾರ್‌ ದಾಳಿ

06:00 AM Mar 28, 2018 | Team Udayavani |

ವಿಜಯಪುರ: ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಮುದ್ದೇಬಿಹಾಳ ಮನೆಯಲ್ಲಿ ಸೀರೆ ಹಂಚುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಏನೂ ಸಿಗದೇ ಬರಿಗೈಲಿ ವಾಪಸ್‌ ಆಗಿದೆ.

Advertisement

ಮಂಗಳವಾರ ಮಧ್ಯಾಹ್ನ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ಮುದ್ದೇಬಿಹಾಳ ತಹಶೀಲ್ದಾರ್‌ ಎಂ.ಎ.ಎಸ್‌.ಬಾಗವಾನ ನೇತೃತ್ವದಲ್ಲಿ ದಾಳಿ ನಡೆಯಿತು. ದೇವರಹಿಪ್ಪರಗಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಎ.ಎಸ್‌.ಪಾಟೀಲ ನಡಹಳ್ಳಿ ಕಾಂಗ್ರೆಸ್‌ ಉಚ್ಚಾಟನೆ ಬಳಿಕ ಜೆಡಿಎಸ್‌ ಸಖ್ಯ ಬೆಳೆಸಿ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಅವರು ಮೂರು ದಿನಗಳಿಂದ
ತಮ್ಮ ಮನೆಯಲ್ಲಿ ಹೋಮ ಕಾರ್ಯಕ್ರಮ ನಡೆಸಿದ್ದು, ಉಡಿ ತುಂಬುವ ಕಾರ್ಯಕ್ರಮ ನಿಮಿತ್ತ ಸಾವಿರಾರು ಮಹಿಳೆಯರು ನಡಹಳ್ಳಿ ಅವರ ಮನೆಯಲ್ಲಿ ನೆರೆದಿದ್ದರು. ಈ ಹಂತದಲ್ಲಿ ಚುನಾವಣೆ ಆಮಿಷಕ್ಕಾಗಿ ಸೀರೆ ಹಾಗೂ ಇತರ ವಸ್ತುಗಳನ್ನು ಹಂಚುತ್ತಿದ್ದಾರೆ ಎಂಬ
ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆ ಆಗಿತ್ತು. ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ಸೂಚನೆ ಮೇರೆಗೆ ದಾಳಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next