Advertisement

Tadviruddha; ಮರ್ಡರಿ ಮಿಸ್ಟರಿ ʼತದ್ವಿರುದ್ದʼ

06:32 PM Aug 31, 2024 | Team Udayavani |

ಕಂಟೆಂಟ್‌ ನಂಬಿಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ತದ್ವಿರುದ್ಧ. ಹೀಗೊಂದು ಸಿನಿಮಾ ತಯಾರಾಗಿದ್ದು, ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಸುಚೇಂದ್ರ ಪ್ರಸಾದ್‌, ಹಿರಿಯ ನಟಿ ಸುಮನ್‌ ರಂಗನಾಥ್‌ ಹಾಗೂ ವಿಕ್ರಮ್‌ ಪ್ರಮುಖ ಪಾತ್ರದಲ್ಲಿ ನಟಿಸಿ ರುವ ಈ ಚಿತ್ರವನ್ನು ವಿನೋದ್‌ ಜೆ ರಾಜ್‌ ನಿರ್ದೆಶಿಸಿದ್ದಾರೆ.

Advertisement

ನಿರ್ದೇಶಕ ವಿನೋದ್‌ ಜೆ ರಾಜ್‌ ಮಾತನಾಡಿ, “ಯಶೋಗಾಥೆ ಎಂಬ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರ ತದ್ವಿರುದ್ಧ. ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೇ ತದ್ವಿರುದ್ಧ.

ಇದೊಂದು 90 ಕಾಲಘಟ್ಟದಲ್ಲಿ ನಡೆಯುವ ಕಥೆ. ಮರ್ಡರ್‌ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವಿಕರಿಸಿಲ್ಲ. ಸುಚೇಂದ್ರ ಪ್ರಸಾದ್‌, ಸುಮನ್‌ ರಂಗನಾಥ್‌, ವಿಕ್ರಮ್‌ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಸಕಲೇಶಪುರದಲ್ಲೇ ಪೂರ್ತಿ ಚಿತ್ರೀಕರಣ ನಡೆದಿದೆ. ಹಾಡಿಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಹೈಲೆಟ್‌’ಎನ್ನುತ್ತಾರೆ.

ನಿರ್ದೇಶಕರು ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಸಸ್ಪೆನ್ಸ್‌ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲಎಂದರು ನಟಿ ಸುಮನ್‌ ರಂಗನಾಥ್‌.

ನಟ ಸುಚೇಂದ್ರ ಪ್ರಸಾದ್‌ ಮಾತನಾಡಿ, ಸಿದ್ಧ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರವಿದು. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ ಎಂದರು.

Advertisement

ಚಿತ್ರದಲ್ಲಿ ಅಭಿನಯಿಸಿರುವ ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್‌ ಚಿತ್ರದ ಕುರಿತು ಮಾತನಾಡಿದರು. ಚಾರ್ಮಿಯನ್‌ ಮೋಶನ್‌ ಪಿಕ್ಚರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next